ಮನೆ ಅಪರಾಧ ತುಮಕೂರು: ಕಾರು-ಕ್ಯಾಂಟರ್ ಡಿಕ್ಕಿ, ನಾಲ್ವರು ಸಾವು

ತುಮಕೂರು: ಕಾರು-ಕ್ಯಾಂಟರ್ ಡಿಕ್ಕಿ, ನಾಲ್ವರು ಸಾವು

0

ತುಮಕೂರು(Tumkur): ಕಾರು ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ಬಳಿ ರಾ.ಹೆ. 206 ರಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿಯ ರಾಮಣ್ಣ(58), ಸಾಗರ್ (23), ಚಿಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ನಾರಾಯಣಪ್ಪ (54) ಮೃತರು ಎಂದು ಗುರುತಿಸಲಾಗಿದೆ.

ಕ್ಯಾಂಟರ್ ವಾಹನ ತುಮಕೂರಿನಿಂದ ಕೆಬಿ ಕ್ರಾಸ್ ಕಡೆ ಪ್ರಯಾಣಿಸುತ್ತಿತ್ತು.

ಇಂಡಿಕಾ ಕಾರ್ ಕೆಬಿ ಕ್ರಾಸ್ ನಿಂದ ತುಮಕೂರು ಕಡೆ ಪ್ರಯಾಣಿಸುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ನಾಗರತ್ನ ಎಂಬುವರಿಗೆ ಗಾಯವಾಗಿದ್ದು, ಇವರು ನಾರಾಯಣಪ್ಪನ ಪತ್ನಿಯಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.