ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಒತ್ತಡದ ಜೀವನದಿಂದಾಗಿ ಬೇಸತ್ತಿದ್ದೀರಾ? ಹಾಗಾದರೆ ಬೆಟ್ಟಗಳಿರುವ ತಾಣಗಳಿಗೆ ಪ್ರವಾಸ ಮಾಡಿ. ಏಕೆಂದರೆ ಬೆಟ್ಟಗಳು ತಮ್ಮ ಮನೋಹರವಾದ ವಾತಾವರಣ ಮತ್ತು ತಂಪಾದ ಗಾಳಿಯಿಂದ ನಿಮ್ಮ ಮೈ ಮನಸ್ಸನ್ನು ಪ್ರಶಾಂತವಾಗಿಸುತ್ತದೆ. ಅಲ್ಲದೆ, ನಿಮ್ಮ ಮನಸ್ಸು ನಿರ್ಮಲವಾದ ವಾತಾವರಣವನ್ನು ಆಸ್ವಾದಿಸುತ್ತದೆ.
ಕುಟುಂಬದೊಂದಿಗೆ ಭೇಟಿ ನೀಡಲು ನಮ್ಮ ಕರ್ನಾಟಕದಲ್ಲಿ ಅಸಂಖ್ಯಾತ ತಾಣಗಳಿವೆಯಾದರೂ ಬೆಟ್ಟಗಳ ಪ್ರವಾಸವೇ ಬೇರೆ. ಹಿತವಾದ ಅನುಭವ ಪಡೆಯಲು ಬಯಸುವ ಕುಟುಂಬವು ತಪ್ಪದೇ ಲೇಖನದಲ್ಲಿ ಹೇಳಲಾಗುವ ತಾಣಗಳಿಗೆ ವಾರಾಂತ್ಯ ಸಮಯದಲ್ಲಿ ಭೇಟಿ ನೀಡಿ. ಅದು ಒಂದು ವಾರದ ಮಟ್ಟಿಗೆ ನೀವು ಉಲ್ಲಾಸವಾಗಿರುವಂತೆ ಮಾಡುತ್ತವೆ.
ಬಿಆರ್ ಹಿಲ್ಸ್
• ಕರ್ನಾಟಕದ ಬಿಆರ್ ಹಿಲ್ಸ್ ಹೆಚ್ಚು ಜನಪ್ರಿಯವಾದ ಪ್ರವಾಸಿ ತಾಣವಾಗಿದೆ.
• ಇದನ್ನು ಅಧಿಕೃತವಾಗಿ ಬಿಳಿಗಿರಿರಂಗನ ಬೆಟ್ಟಗಳು ಎಂದೇ ಕರೆಯುತ್ತಾರೆ.
• ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ಪ್ರಶಾಂತತೆಯನ್ನು ಉಡುಗೊರೆಯಾಗಿ ನೀಡುತ್ತದೆ.
• ಸಮುದ್ರ ಮಟ್ಟದಿಂದ ಸುಮಾರು 5900 ಅಡಿ ಎತ್ತರದಲ್ಲಿ ಈ ಗಿರಿಧಾಮವಿದೆ. ಇದು ಕರ್ನಾಟಕ ಜನರ ಹಾಟ್ ಫೇವರೆಟ್ ತಾಣವು ಹೌದು.
• ಎಲ್ಲಿ ನೋಡಿದರೂ ಹಚ್ಚ ಹಸಿರಿನ ಸೌಂದರ್ಯ ಮತ್ತು ವನ್ಯಮೃಗಗಳನ್ನು ಹೊಂದಿದೆ.
• ಇಲ್ಲಿನ ಬಿಳಿಗಿರಿ ರಂಗನ ದೇವಾಲಯವು ಪ್ರಮುಖ ಯಾತ್ರಾಸ್ಥಳವಾಗಿದೆ.
ಚಿಕ್ಕಮಗಳೂರು
• ಚಿಕ್ಕಮಗಳೂರು ಪ್ರವಾಸ ನಿಜಕ್ಕೂ ರೋಮಾಂಚಕ ಎಂದೇ ಹೇಳಬಹುದು.
• ಎತ್ತ ನೋಡಿದರೂ ಕಾಫಿ ತೋಟಗಳು, ಹಚ್ಚ ಹಸಿರಿನ ಸೌಂದರ್ಯದ ನಡುವೆ ಜಲಧಾರೆಗಳು.
• ಸಾಹಸ ಕ್ರೀಡೆ ಇಷ್ಟಪಡುವ ಮಂದಿಗೆ ಸ್ವರ್ಗವೇ ಸರಿ.
• ಇನ್ನು, ನವ ಜೋಡಿಗಳು ಚಿಕ್ಕಮಗಳೂರಿನ ಸೌಂದರ್ಯವನ್ನು ಸವಿಯಲು ಮತ್ತು ಮಧುಚಂದ್ರಕ್ಕಾಗಿ ಇಲ್ಲಿ ಭೇಟಿ ನೀಡುತ್ತಾರೆ.
• ಮುಳ್ಳಯ್ಯನಗಿರಿ ಶ್ರೇಣಿಗಳು ಬಹಳ ಜನಪ್ರಿಯವಾಗಿದೆ.
• ಚಿಕ್ಕಮಗಳೂರಿನ ಕಾಫಿಯನ್ನು ನೀವು ಒಮ್ಮೆ ಸವಿಯಲೇಬೇಕು. ಹಾಗೆಯೇ ಅತ್ಯುತ್ತಮವಾದ ಹೋಂ ಸ್ಟೇಗಳು, ರೆಸಾರ್ಟ್ಗಳು ಇಲ್ಲಿವೆ.
ನಂದಿ ಬೆಟ್ಟ
• ದೂರದ ಗಿರಿಧಾಮಗಳನ್ನು ಹೊರತು ಪಡಿಸಿ ಒಂದು ದಿನದ ಮಟ್ಟಿಗೆ ಸ್ಥಳದ ಹುಡುಕಾಟದಲ್ಲಿದ್ದರೆ ನಂದಿ ದುರ್ಗಕ್ಕೆ ಭೇಟಿ ಕೊಡಿ.
• ವರ್ಷವಿಡೀ ಆಹ್ಲಾದಕರವಾದ ವಾತಾವರಣವನ್ನು ನಂದಿ ಬೆಟ್ಟ ಹೊಂದಿರುತ್ತದೆ.
• ಸಮುದ್ರಮಟ್ಟದಿಂದ ಸುಮಾರು 4849 ಅಡಿ ಎತ್ತರದಲ್ಲಿರುವ ನಂದಿ ಬೆಟ್ಟ ಹಚ್ಚ ಹಸಿರಿನ ವಾತಾವರಣದಲ್ಲಿ ನೆಲೆಸಿದೆ.
• ಬೆಟ್ಟದ ಮೇಲೆ ಪ್ರಾಚೀನ ದೇವಾಲಯ, ಸ್ಮಾರಕಗಳು ಮತ್ತು ಐತಿಹಾಸಿಕ ಕೋಟೆಗಳಿವೆ.
• ಟ್ರೆಕ್ಕಿಂಗ್, ಸೈಕ್ಲಿಂಗ್, ಕ್ಯಾಂಪಿಂಗ್ನಂತಹ ಹೊರಾಂಗಣ ಚಟುವಟಿಕೆಗಳನ್ನು ಎಂಜಾಯ್ ಮಾಡಬಹುದು.
ಕೆಮ್ಮಣ್ಣುಗುಂಡಿ
• ಕೆಮ್ಮಣ್ಣುಗುಂಡಿ ಕರ್ನಾಟಕ ಮಂದಿಯ ಹಾಟ್ ಫೇವರೆಟ್ ತಾಣ ಎಂದೇ ಹೇಳಬಹುದು.
• ಬಾಬಾ ಬುಡನ್ ಗಿರಿ ಶ್ರೇಣಿಯಲ್ಲಿ ಈ ಸುಂದರವಾದ ಗಿರಿಧಾಮವಿದೆ.
• ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ನೀವು ಅಂತ್ಯವಿಲ್ಲದೇ ಆನಂದಿಸಬಹುದು.
• ಅಲ್ಲದೆ, ಟ್ರೆಕ್ಕಿಂಗ್, ಕ್ಯಾಂಪಿಂಗ್ನಂತಹ ರೋಮಾಂಚಕ ಚಟುವಟಿಕೆಗಳನ್ನು ಕೈಗೊಳ್ಳಬಹುದು.
• ಇಲ್ಲಿನ ಹೆಬ್ಬೆ ಜಲಪಾತ, ರಾಕ್ ಗಾರ್ಡನ್, ರಾಜಭವನ, ಝಡ್ ಪಾಯಿಂಟ್, ಕಲತ್ಗಿರಿ ಜಲಪಾತ, ಬಾಬಾ ಬುಡನ್ ಹಿಲ್ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನು ಮಿಸ್ ಮಾಡಿಕೊಳ್ಳಲೇಬಾರದ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಆಗುಂಬೆ
• ಆಗುಂಬೆಯನ್ನು ‘ದಕ್ಷಿಣ ಭಾರತದ ಚಿರಾಪುಂಜಿ’ ಎಂದೇ ಕರೆಯುತ್ತಾರೆ.
• ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ವರ್ಷದ ಬಹು ಕಾಲ ಮಳೆಯನ್ನು ಪಡೆಯುವ ಸ್ಥಳ ಇದಾಗಿದೆ.
• ಒಂದು ವರ್ಷದಲ್ಲಿ ಸುಮಾರು 7000 ಮಿ.ಮೀ ಗಿಂತಲೂ ಹೆಚ್ಚು ಮಳೆಯನ್ನು ಪಡೆಯುತ್ತದೆ.
• ಚುಮು ಚುಮು ಚಳಿಯನ್ನು ಉಂಟು ಮಾಡುವ ವಾತಾವರಣವು ರೋಮಾಂಚಕಾರಿಯಾಗಿರುತ್ತದೆ.
• ಸುಂದರವಾದ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡುವುದನ್ನು ಜನರು ಆನಂದಿಸುತ್ತಾರೆ.
• ಟ್ರೆಕ್ಕಿಂಗ್ ಮಾಡಲು, ಪ್ರಕೃತಿಯನ್ನು ಆಸ್ವಾದಿಸಲು ಇದಕ್ಕಿಂತ ಉತ್ತಮವಾದ ಸ್ಥಳ ಬೇಕೆ?