ಮನೆ ಸುದ್ದಿ ಜಾಲ ಮೈಸೂರು: ಜಿಲ್ಲಾ ಆಸ್ಪತ್ರೆಗೆ  ಜಿಲ್ಲಾಧಿಕಾರಿಗಳ  ದಿಢೀರ್‌ ಭೇಟಿ, ಪರಿಶೀಲನೆ

ಮೈಸೂರು: ಜಿಲ್ಲಾ ಆಸ್ಪತ್ರೆಗೆ  ಜಿಲ್ಲಾಧಿಕಾರಿಗಳ  ದಿಢೀರ್‌ ಭೇಟಿ, ಪರಿಶೀಲನೆ

0

ಮೈಸೂರು(Mysuru): ಇಂದು ನಗರದ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ದಿಢೀರ್‌ ಭೇಟಿ ನೀಡಿ ಆಸ್ಪತ್ರೆಯ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್‌ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮವಾಗಿ ಬೆಡ್ ಗಳ ಸೌಲಭ್ಯವಿರುವದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಆಸ್ಪತ್ರೆ ಕಾರ್ಯ ನಿರ್ವಹಣೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ  ರೋಗಿಗಳ ಜೊತೆ ಮಾತನಾಡಿದ ಅವರು ಆಸ್ಪತ್ರೆಯಲ್ಲಿನ  ವೈದ್ಯರ ಕರ್ತವ್ಯ ನಿರ್ವಹಣೆ, ಊಟದ ವ್ಯವಸ್ಧೆ ಮತ್ತು ಶುಚಿತ್ವ  ಬಗ್ಗೆ  ಮಾಹಿತಿ ಪಡೆದರು.

ರೋಗಿಗಳಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಹಾಗೂ ಶುಚಿತ್ವ ಕಾಪಾಡಿಕೊಳ್ಳಲು ಸೂಚಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಸರ್ಜನ್  ಡಾ ಅಮರನಾಧ್ ಹಾಗೂ ಆಸ್ಪತ್ರೆಯ ವೈದ್ಯರು ಉಪಸ್ಧಿತರಿದ್ದರು.