ಮನೆ ರಾಜಕೀಯ ಸ್ಯಾಂಟ್ರೊ ರವಿ ಮೇಲೆ ಕ್ರಮಕ್ಕೆ ಸೂಚನೆ: ಆರಗ ಜ್ಞಾನೇಂದ್ರ

ಸ್ಯಾಂಟ್ರೊ ರವಿ ಮೇಲೆ ಕ್ರಮಕ್ಕೆ ಸೂಚನೆ: ಆರಗ ಜ್ಞಾನೇಂದ್ರ

0

ಶಿವಮೊಗ್ಗ(Shivamogga): ಸ್ಯಾಂಟ್ರೊ ರವಿ ಬಗ್ಗೆ ಮೈಸೂರು ಠಾಣೆಯಲ್ಲಿ ಒಂದಷ್ಟು ಕೇಸ್‌’ಗಳಿವೆ. ಈ ಹಿಂದೆ ಆತನ ಮೇಲೆ ಗೂಂಡಾ ಕೇಸ್ ಕೂಡ ಹಾಕಲಾಗಿತ್ತು. ಹೀಗಾಗಿ ತಕ್ಷಣ ಆತನ ಮೇಲೆ ಕ್ರಮಕ್ಕೆ ಪೊಲೀಸ್ ಕಮಿಷನರ್‌’ಗೆ ಸೂಚನೆ ನೀಡಿರುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಟ್ರೊ ರವಿ ವಿರುದ್ಧ ಯಾರೆಲ್ಲ ದೂರು ನೀಡಿದ್ದಾರೆ ಎಂಬುದರ ಬಗ್ಗೆ ಸವಿಸ್ತಾರ ತನಿಖೆ ಮಾಡಲು ತಿಳಿಸಿರುವೆ. ರವಿ ಏನೆಲ್ಲ ಮೋಸ ಮಾಡಿದ್ದಾನೆ ಅದರ ಮಾಹಿತಿ ಪಡೆಯಬೇಕಿದೆ. ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ತನಿಖಾಧಿಕಾರಿಗೆ ಮಾಹಿತಿ ನೀಡಿ ಸಹಕರಿಸಲಿ

ಸ್ಯಾಂಟ್ರೊ ರವಿ ಬಗ್ಗೆ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಬಳಿ ತುಂಬಾ ಮಾಹಿತಿ ಇದೆ. ರವಿಯದ್ದೂ ಕುಮಾರಸ್ವಾಮಿ ಜೊತೆ ಅದ್ಯಾವ ರೀತಿ ಸಂಬಂಧ ಇದೆ ಎನ್ನುವುದು ಗೊತ್ತಾಗಬೇಕಿದೆ. ಕುಮಾರಸ್ವಾಮಿ ಅವರಿಗೆ ಮಾತ್ರ ಫೋಟೊ, ಆಡಿಯೊ ಹೇಗೆ ಸಿಗುತ್ತದೆ. ಇದು ಆಲೋಚನೆ ಮಾಡಬೇಕಾದ ಸಂಗತಿ. ಅವರ ಬಳಿ ಇನ್ನಷ್ಟು ಮಾಹಿತಿ ಇದ್ದರೆ ತನಿಖಾಧಿಕಾರಿಗೆ ಕೊಟ್ಟು ಸಹಕರಿಸಬೇಕು. ತನಿಖೆಗೂ ಅನುಕೂಲ ಆಗುತ್ತೆ. ಆತ ದುಷ್ಟ ಆಗಿದ್ದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.