ಮನೆ ರಾಜ್ಯ ಬಿಜೆಪಿಯವರು ರಾಜ್ಯದ ಜನರ ಹಣ ಲೂಟಿ ಮಾಡಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ

ಬಿಜೆಪಿಯವರು ರಾಜ್ಯದ ಜನರ ಹಣ ಲೂಟಿ ಮಾಡಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ

0

ಸಿಂದಗಿ: ಬಿಜೆಪಿಯವರು ರಾಜ್ಯದ ಜನರ ಹಣವನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ರೈತರಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

ಸಿಂದಗಿಯಲ್ಲಿ ಇಂದು ಮಾತನಾಡಿದ ಅವರು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೇ 2028ಕ್ಕೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

2028ರ ಬಳಿಕ ನಿಮ್ಮ ಬಳಿ ಮತ ಕೇಳಲು ಬರಲ್ಲ. ನಮ್ಮ ತಪ್ಪಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ . ಹೆಚ್.ಡಿ ದೇವೆಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ಮರೆತಿಲ್ಲ. ಪಂಚರತ್ನ ಯೋಜನೆಗೆ ಜಾತಿ ಧರ್ಮ ಇಲ್ಲ.  ಈ 5 ಕಾರ್ಯಕ್ರಮಗಳು ಜಾರಿಯಾದರೇ ರಾಮರಾಜ್ಯವಾಗುತ್ತದೆ ಎಂದು ಹೇಳಿದರು.