ಮನೆ ಸುದ್ದಿ ಜಾಲ ಆಕಸ್ಮಿಕ ಬೆಂಕಿಗೆ ಒಕ್ಕಣೆ ಮಾಡಲು ಹಾಕಿದ್ದ ಹುಲ್ಲು ಬೆಂಕಿಗಾಹುತಿ

ಆಕಸ್ಮಿಕ ಬೆಂಕಿಗೆ ಒಕ್ಕಣೆ ಮಾಡಲು ಹಾಕಿದ್ದ ಹುಲ್ಲು ಬೆಂಕಿಗಾಹುತಿ

0

ಹುಣಸೂರು(Hunsur): ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಒಕ್ಕಣೆ ಮಾಡಲು ಹಾಕಿದ್ದ ಭತ್ತದ ಸಮೇತ ಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಹೊಸೂರು ಕೊಡಗು ಕಾಲೋನಿಯಲ್ಲಿ ನಡೆದಿದೆ.

ಹೊಸೂರು ಕೊಡಗು ಕಾಲೋನಿಯ ಡೇರಿ ಮಾಜಿ ಅಧ್ಯಕ್ಷ ರಾಮೇಗೌಡರಿಗೆ ಸೇರಿದ ಎರಡೂವರೆ ಎಕರೆ ಗದ್ದೆಯ ಭತ್ತದ ಬೆಳೆಯನ್ನು ಕಟಾವು ಮಾಡಿ ಒಕ್ಕಣೆಗಾಗಿ ಹಾಕಿದ್ದರು.

ಸೋಮವಾರ ಮದ್ಯಾಹ್ನ ಭತ್ತದ ಹುಲ್ಲಿನ ಮೆದೆಗೆ ಬಿಂಕಿ ಬಿದ್ದಿದ್ದು, ರಾತ್ರಿಯಿಡಿ ಮೆದೆ ಹೊತ್ತು ಉರಿದಿದೆ.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.