ಮನೆ ರಾಜಕೀಯ ನವೀನ್ ಮೃತದೇಹ  ತರಲು ಪ್ರಯತ್ನ: ಸಿಎಂ ಬೊಮ್ಮಾಯಿ

ನವೀನ್ ಮೃತದೇಹ  ತರಲು ಪ್ರಯತ್ನ: ಸಿಎಂ ಬೊಮ್ಮಾಯಿ

0

 ಬೆಂಗಳೂರು:  ನವೀನ್ ಗದಯಾನಗೌಡರ್ ಮೃತದೇಹವನ್ನು ಉಕ್ರೇನ್  ಶವಾಗಾರದಲ್ಲಿ  ಸಂರಕ್ಷಿಡಲಾಗಿದೆ. ಅದನ್ನು ಭಾರತಕ್ಕೆ ತರಲು ಸರ್ವ ಪ್ರಯತ್ನ ಮಾಡಲಾಗಿತ್ತಿದೆ

ಎಂದು ವಿದೇಶಾಂಗ ಸಚಿವರು ತಮಗೆ  ತಿಳಿಸಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 ಬೆಂಗಳೂರಿನಲ್ಲಿ ಇಂದು ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು . 

ಉಕ್ರೇನ್ ನಲ್ಲಿ ಈಗ ಶೆಲ್ ದಾಳಿ ನಡೆಯುತ್ತಿದೆ. ದಾಳಿ ನಿಂತ ಕೂಡಲೇ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.  ಭಾರತೀಯ ರಾಯಭಾರಿ ಕಚೇರಿಯವರೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದರು‌.