ಮನೆ ಅಪರಾಧ ಬಸ್-ಬೈಕ್ ನಡುವೆ ಅಪಘಾತ: ಓರ್ವ ಸಾವು

ಬಸ್-ಬೈಕ್ ನಡುವೆ ಅಪಘಾತ: ಓರ್ವ ಸಾವು

0

ಕುರುಗೋಡು: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಮುಖ್ಯ ಹೆದ್ದಾರಿ ರಸ್ತೆಯ ವಿಟಿ ಕ್ಯಾಂಪ್ ಬಳಿ ನಡೆದಿದೆ.

ಗಾದಿಗನೂರು ಗ್ರಾಮದ ನಿವಾಸಿ ಕುರುಬರ ಕಲ್ಲಪ್ಪ (41) ಮೃತ ಪಟ್ಟ ವ್ಯಕ್ತಿ.

ಜಿಂದಾಲ್ ಕಾರ್ಖಾನೆಯಲ್ಲಿ ಕೆಲಸ ಮುಗಿಸಿಕೊಂಡು ಹೆಂಡತಿ ಗ್ರಾಮವಾದ ಸಿಂದಿಗೇರಿಗೆ ಊರಿನ ಹಬ್ಬಕ್ಕೆ ತೆರಳುತ್ತಿರುವಾಗ ಸಿರುಗುಪ್ಪ ಕಡೆಯಿಂದ ಬರುತಿದ್ದ ಸಾರಿಗೆ ಬಸ್, ಬಳ್ಳಾರಿ ಮಾರ್ಗವಾಗಿ ಬರುತಿದ್ದ ಬೈಕ್ ನಡುವೆ ಸಂಭವಿಸಿದೆ.

ಸ್ಥಳಕ್ಕೆ ಕುರುಗೋಡು ಪಿಎಸ್’ಐ ಸಣ್ಣ ಈರೇಶ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.