ಮನೆ ರಾಜ್ಯ ಬಡತನವನ್ನು ಬಳಸಿಕೊಂಡು ಮತಾಂತರ ಮಾಡುವುದು ಸರಿಯಲ್ಲ: ರವಿಶಂಕರ್‌ ಗುರೂಜೀ

ಬಡತನವನ್ನು ಬಳಸಿಕೊಂಡು ಮತಾಂತರ ಮಾಡುವುದು ಸರಿಯಲ್ಲ: ರವಿಶಂಕರ್‌ ಗುರೂಜೀ

0

ಹೊಸಪೇಟೆ: ಮತಾಂತರ ತುಂಬ ಚಿಂತಾಜನಕವಾದ ವಿಷಯ. ಬಡತನವನ್ನು ಬಳಸಿಕೊಂಡು ಮತಾಂತರ ಮಾಡುವುದು ಸರಿಯಲ್ಲ ಎಂದು ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥಾಪಕ ರವಿಶಂಕರ್‌ ಗುರೂಜೀ ಹೇಳಿದರು.

ತಾಲ್ಲೂಕಿನ ಹಾರೋವನಹಳ್ಳಿ ಸಮೀಪದ ಫಾರ್ಮ್‌ ಹೌಸ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸತ್ಸಂಗದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಮತಾಂತರಕ್ಕಾಗಿಯೇ ವಿದೇಶಗಳಿಂದ ಅಪಾರ ಪ್ರಮಾಣದ ಹಣ ಭಾರತಕ್ಕೆ ಹರಿದು ಬರುತ್ತಿದೆ. ಹೊರದೇಶಗಳಿಂದ ಕೆಲವರು ಮತಾಂತರಕ್ಕಾಗಿಯೇ ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಧರ್ಮ ಬೋಧನೆ ಹೆಸರಿನಲ್ಲಿ ಹೊರದೇಶಗಳಿಂದ ಬರುತ್ತಿರುವವರಲ್ಲಿ ಅನೇಕ ವಿದೇಶಿ ಯೋಜನೆಗಳು ಸಹ ಇರುತ್ತವೆ. ಬಡತನ, ಜನರ ದೌರ್ಬಲ್ಯವನ್ನು ಬಳಸಿಕೊಂಡು, ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ಸರಿಯಾದುದಲ್ಲ ಎಂದರು.

ಭಾರತದ ಶ್ರೇಷ್ಠತೆ, ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಆತ್ಮಾಭಿಮಾನ, ಆತ್ಮವಿಶ್ವಾಸ ಹೆಚ್ಚಾದರೆ ಪ್ರತಿಯೊಬ್ಬರೂ ಅವರ ಧರ್ಮ, ಪರಂಪರೆ ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.