ಮನೆ ಸುದ್ದಿ ಜಾಲ ಚಾಮರಾಜನಗರ: ಆನೆ ದಾಳಿಯಿಂದ ಪಾರಾದ ಬೈಕ್ ಸವಾರ

ಚಾಮರಾಜನಗರ: ಆನೆ ದಾಳಿಯಿಂದ ಪಾರಾದ ಬೈಕ್ ಸವಾರ

0

ಚಾಮರಾಜನಗರ: ತಾಲ್ಲೂಕಿನ ಗಡಿಭಾಗ ತಾಳವಾಡಿ-ತಲೆಮಲೆ- ದಿಂಬಂ ರಸ್ತೆಯಲ್ಲಿ ಬೈಕ್ ಸವಾರರೊಬ್ಬರು ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಸವಾರರನ್ನು ತಾಳವಾಡಿ ಸಮೀಪದ ನಲ್ಲಿತಾಳಪುರದ ರಾಮಸ್ವಾಮಿ ಎಂದು ಗುರುತಿಸಲಾಗಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಎದುರಿನ ವಾಹನದಲ್ಲಿರುವರು ಚಿತ್ರೀಕರಣ ಮಾಡಿದ್ದಾರೆ.

ಅವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ರಸ್ತೆ ತಿರುವಿನಲ್ಲಿ ಆನೆ ಎದುರಾಗಿದ್ದು, ಗಾಬರಿಗೊಂಡ ಸವಾರ ರಸ್ತೆ ಬದಿಯಲ್ಲಿ ಬಿದ್ದರು. ತಕ್ಷಣ ಆನೆ ಅವರತ್ತ ನುಗ್ಗಿತು.

ಈ ಸಂದರ್ಭದಲ್ಲಿ ಎದುರಿಗೆ ಕಾರಿನಲ್ಲಿದ್ದವರು ಜೋರಾಗಿ ಹಾರ್ನ್ ಹಾಕಿ, ಚೀರಾಡಿದರು. ಗದ್ದಲದಿಂದಾಗಿ ಆನೆ ಅಲ್ಲೇ ನಿಂತಿತು. ಸವಾರ ಕಾರಿನತ್ತ ಬಂದು ಪ್ರಾಣ ಉಳಿಸಿಕೊಂಡರು