ಹೈದರಾಬಾದ್: ವ್ಯಕ್ತಿಯೋರ್ವ ತನ್ನ ಪತ್ನಿ, ಮಗುವನ್ನು ತನ್ನ ಮಗಳ ಮುಂದೆಯೇ ಹತ್ಯೆ ಮಾಡಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್ ನ ಅನಾಜ್ ಪುರ ಎಂಬಲ್ಲಿ ನಡೆದಿದೆ.
ಮೃತರನ್ನು ಕಂಡಿ ಕಂಟಿ ಲಾವಣ್ಯ(23) ಮತ್ತು ಕ್ರಿಯಾಂಶ್ (ಒಂದೂವರೆ ತಿಂಗಳು) ಎಂದು ಗುರುತಿಸಲಾಗಿದೆ. ಎರ್ಪುಳ ಧನರಾಜ್ ಕೊಲೆಗೈದ ಆರೋಪಿ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅನಾಜ್ ಪುರದ ನಿವಾಸಿಯಾದ ಎರ್ಪುಳ ಧನರಾಜ್ ಕಳೆದ ನಾಲ್ಕು ವರ್ಷಗಳ ಹಿಂದೆ ಬಂಡರವೀರ್ಯಾಲದ ಕಂಡಿಕಂಟಿ ಲಾವಣ್ಯ ಎಂಬವರನ್ನು ಮದುವೆಯಾಗಿದ್ದ. ಈತನಿಗೆ ಆದ್ಯ (2.5 ವರ್ಷ) ಮತ್ತು ಕ್ರಿಯಾಂಶ್ ಎಂಬ ಪುಟ್ಟ ಮಕ್ಕಳಿದ್ದರು.
ಧನ್ರಾಜ್ ತಾಯಿ ಮೃತಪಟ್ಟಿದ್ದರು. ತಂದೆ ಬಾಲಯ್ಯ ಜೊತೆ ದಂಪತಿ ವಾಸವಿದ್ದರು. ಧನರಾಜ್ ಕೆಲವು ದಿನಗಳ ಹಿಂದಷ್ಟೇ ತನ್ನ ಮಗುವಿನ 21 ದಿನ ಆಚರಣೆ ಮಾಡಿದ್ದನು. ಬಳಿಕ ತನ್ನ ಹೆಂಡತಿಯನ್ನು ತವರಿಗೆ ಕಳುಹಿಸಿದ್ದನು.
ಬುಧವಾರ ಬೆಳಿಗ್ಗೆ ಧನರಾಜ್ ತನ್ನ ಹೆಂಡತಿಗೆ ಕರೆ ಮಾಡಿ ಬಂಡರವೀರ್ಯಾಲಕ್ಕೆ ಬರುತ್ತಿದ್ದೇನೆ, ತನ್ನ ಮಗುವಿನ ಲಸಿಕೆ ಹಾಕಿಸುವ ಬಗ್ಗೆ ವ್ಯವಸ್ಥೆ ಮಾಡಬೇಕೆಂದು ಹೇಳಿದ್ದಾನೆ. ಆ ಬಳಿಕ ಬೆಳಿಗ್ಗೆ 11 ಗಂಟೆಗೆ ತನ್ನ ಅತ್ತೆ ಮನೆಗೆ ಹೋಗಿ ತನ್ನ ಹೆಂಡತಿಯೊಂದಿಗೆ ಅನಾಜ್ ಪುರಕ್ಕೆ ವಾಪಸಾಗಿದ್ದಾನೆ.
ಬಳಿಕ ಧನರಾಜ್ ಹೆಂಡತಿಯಲ್ಲಿ ಕ್ಯಾತೆ ತೆಗೆದಿದ್ದು, ಈ ವೇಳೆ ಧನರಾಜ್ ಬಿಯರ್ ಬಾಟಲಿಯಿಂದ ಲಾವಣ್ಯಳ ಮೇಲೆ ಹಲ್ಲೆ ಮಾಡಿದ್ದಾನೆ. ಕೊಡಲಿಯಿಂದಲೂ ಹಲ್ಲೆ ಮಾಡಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನ್ನ ಒಂದೂವರೆ ತಿಂಗಳ ಮಗುವನ್ನು ನೀರಿನ ತೊಟ್ಟಿಗೆ ಎಸೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಧನರಾಜ್ ತನ್ನ ಎರಡೂವರೆ ವರ್ಷ ಮಗಳ ಮುಂದೆಯೇ ಬರ್ಬರ ಕೃತ್ಯ ಎಸಗಿದ್ದಾನೆ. ಅಪ್ಪ ಕ್ರೌರ್ಯವನ್ನು ಕಂಡು ಹೆದರಿದ ಬಾಲಕಿ ಮನೆಯಿಂದ ಹೊರಗೊಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾಳೆ.
ಪಕ್ಕದ ಮನೆಯವರು ಬಾಲಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಧನರಾಜ್ ತನ್ನ ಮಗಳನ್ನು ಕೊಲ್ಲಲು ಎಲ್ಲೆಡೆ ಹುಡುಕಿದ್ದಾನೆ. ಆದರೆ ಎಲ್ಲೂ ಕಾಣದ ಬಳಿಕ ಸ್ಥಳದಿಂದ ತನ್ನ ಬೈಕ್’ನಲ್ಲಿ ಪರಾರಿಯಾಗಿದ್ದಾನೆ.
ಅನುಮಾನಗೊಂಡ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಲಾವಣ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಲ್ಲೇ ಮಗು ಕೂಡಾ ಪಕ್ಕದ ನೀರಿನ ತೊಟ್ಟಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಅಬ್ದುಲ್ಲಪುರಮೆಟ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರು ಮರಿಗಳಿಗೆ ಜನ್ಮ ನೀಡಿದ ಚಾರ್ಲಿ
ಚುನಾವಣೆಯಲ್ಲಿ "ಕೈ" ಅಭ್ಯರ್ಥಿಯ ಗಿಫ್ಟ್ ಬಾಕ್ಸ್ ಸೀಜ್
ಗಿಫ್ಟ್ "ಪೊಲಿಟಿಕ್ಸ್"
ರಾಜ್ಯದ ಜನರಿಗೆ ಗುಡ್ ನ್ಯೂಸ್
ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಹುಂಡಿ ಎಣಿಕೆ ಕಾರ್ಯ
ನರೇಂದ್ರ ಮೋದಿ ಅವರ ಆಸ್ತಿ ಎಷ್ಟಿದೆ ಗೊತ್ತಾ ?
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಡಿಕೆ ಶಿವಕುಮಾರ್..
ಬಸ್ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ…
ಹಿಮಾಚಲ್ ಪ್ರದೇಶ್, ಮಂಡಿಯಲ್ಲಿ ನಾಮಪತ್ರ ಸಲ್ಲಿಸಿದ ಕಂಗನಾ ರಣಾವತ್..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.