ಕಲಬುರಗಿ: ರೈತರ ಮಕ್ಕಳು ಎಲ್ಲಾರೂ ಜೆಡಿಎಸ್ ಪರ ಬರ್ತಿದ್ದಾರೆ. ಪಂಚರತ್ನ ಯಾತ್ರೆ ಶಿವಾತ್ರಿತರ ಆಗುತ್ತಿದೆ. ಅದಕ್ಕೆ ಅವರಿಗೆ ಉರಿಹತ್ತಿ ಬಿಟ್ಟಿದೆ. ಬಿಜೆಪಿಯವರು ಸಾಬರಿಗೂ ಗೌಡರಿಗೂ ಹೊಡೆದಾಟ ಹಚ್ಚುವ ಕಾರ್ಯಕ್ರಮ ಹಾಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಗುರುವಾರ ಕಲಬುರಗಿಯ ಸೇಡಂ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್,ಹಲಾಲ್ ಕಟ್, ಜಟಕಾ ಕಟ್ ಆಗಿಲ್ಲಾ. ಈಗ ಉರಿಗೌಡ, ನಂಜೇಗೌಡ ಕತೆ ಹೇಳ್ಕೊಂಡು ತಿರುಗ್ತಿದ್ದಾರೆ. ಈ ಮೂಲಕ 12 ಜನ ಶಾಸಕರ ಸಿಡಿಯಲ್ಲಿ ಮಂಚದ ಸೌಂಡ್ ಬರುತ್ತಿದೆ ಕಡಿಮೆಯಾಗಬಹುದು ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.
12 ಜನ ಮಂತ್ರಿಗಳು ಸಿಡಿ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಕೋರ್ಟ್ ನಲ್ಲಿ ಹೋಗಿ ನಮ್ಮ ಸಿಡಿ ತೋರಿಸಬೇಡಿ ಎಂದು ಸ್ಟೇ ತಗೊಂಡಿದ್ದಾರೆ. ಆ ಸಿಡಿಯೊಳಗೆ ಮಂಚ ಮುರಿದಿರುವ ದೃಶ್ಯಗಳಿವೆ. ಅವುಗಳನ್ನು ಮುಚ್ಚಿಡಲು ಉರಿಗೌಡ, ನಂಜೇಗೌಡ ವಿಚಾರ ತಗೆದಿದ್ದಾರೆ ಎಂದು ಆರೋಪಿಸಿದರು.
ಸಮಗಾರ ಹರಳಯ್ಯ, ಕಿತ್ತೂರು ರಾಣಿ ಚನ್ನಮನ ನಾಡು, ಬಸವಣ್ಣನ ನಾಡು ಈ ನಾಡಿನ ಮಂತ್ರಿ ಹೇಗಿರಬೇಕು? ಇವರೆಲ್ಲ ಯಾಕೆ ಸಿಡಿತೋರಿಸಬೇಡಿ ಎಂದು ಸ್ಟೇ ತಂದಿದ್ದಾರೆ? ಆ ಸಿಡಿಯೊಳಗೆ ಮಂಚ ಮುರಿದಿರುವ ದೃಶ್ಯಗಳಿವೆ. ಸದಾನಂದಗೌಡರ ಸಿಡಿಯೂ ಇದೆ. ಅವರು ಕೂಡ ಕೋರ್ಟ್ ಗೆ ಸ್ಟೇ ಹಾಕಿದ್ದಾರೆ. ಇಂತಹ ಮಂತ್ರಿಗಳನ್ನು ಮನೆಗೆ ಬಿಟ್ಟುಕೊಳ್ಳಲು ಆಗುತ್ತಾ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಪದೆ ಪದೇ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರ. ಬಿಜೆಪಿ ಸೋಲುವ ಹಿನ್ನಲೆಯಲ್ಲಿ ಗಾಬರಿಯಾಗಿದ್ದಾರೆ. ಜೆಡಿಎಸ್ ಪಕ್ಷ ಕಂಡು ಭಯವಾಗಿದ್ದಾರೆ. ಪಕ್ಷಕ್ಕೆ ಅಲ್ಪ ಸಂಖ್ಯಾತರು, ಒಕ್ಕಲಿಗರು, ಲಿಂಗಾಯರು ಎಲ್ಲೆರು ಜೆಡಿಎಸ್ ಗೆ ಬರಲು ಶುರುಮಾಡಿದ್ದಾರೆ. ಹೀಗಾಗಿ ಹಳೆ ಜನತಾದಳವಾಗಿದೆ. 1995 ರಲ್ಲಿನ ಹಳೆ ಜನತಾದಳ ದಾಟಿಯಲ್ಲಿ ಬೆಳೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬೇಕಾದ್ರೆ ಒಂದು ರೂಪಾಯಿಗೆ ಹತ್ತು ರೂಪಾಯಿ ಬೆಟ್ಟು ಕಟ್ಟುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.