ಮೈಸೂರು: ಲಕ್ಷ್ಮಣತೀರ್ಥ ನದಿಯಿಂದ ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹುಣಸೂರು ತಾಲ್ಲೂಕಿನ ಮರದೂರಿನಿಂದ ನೀರು ಪೂರೈಸುವ ಈ ಯೋಜನೆಯ ಕ್ರಿಯಾ ಯೋಜನೆ (ಡಿಪಿಆರ್) ಅನ್ನು ಜಲ ಸಂಪನ್ಮೂಲ ಇಲಾಖೆಯು ತಯಾರಿಸಿತ್ತು. ಅದನ್ನು 2023ರ ಜ.9ರಂದು ನಡೆದ ಕಾವೇರಿ ನೀರಾವರಿ ನಿಗಮದ 79ನೇ ಮಂಡಳಿ ಸಭೆಯು ಅನುಮೋದಿಸಿತ್ತು. ಯೋಜನೆಗೆ ಸರ್ಕಾರವು ಮಾರ್ಚ್ 27ರಂದು ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಸಂಸದ ಪ್ರತಾಪ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಗಾಲದ 3 ತಿಂಗಳು ಮರದೂರಿನಲ್ಲಿ ಏತ ನೀರಾವರಿ ಮೂಲಕ ನೀರನ್ನು ಎತ್ತಿ 5.32 ಕಿ.ಮೀ ಉದ್ದದ ಪೈಪ್ ಮೂಲಕ 0.235 ಟಿಎಂಸಿ ನೀರನ್ನು ದೊಡ್ಡೇಗೌಡನಕೊಪ್ಪಲಿ ಗ್ರಾಮದಲ್ಲಿ ಜಲಸಂಗ್ರಹಗಾರಕ್ಕೆ ಪೂರೈಸಲಾಗುವುದು. ಅಲ್ಲಿಂದ 1.5 ಕಿ.ಮೀ ಉದ್ದ ಎಡ ಹಾಗೂ 14.7 ಗುರುತ್ವಾಕರ್ಷಣೆ ಬಲಭಾಗದಲ್ಲಿ ಪೈಪ್ಲೇನ್ ಮೂಲಕ 49 ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ
ಹುಣಸೂರಿನ ರಾಯನಹಳ್ಳಿ, ಜಡಗನಹಳ್ಳಿ, ಬನ್ನಕುಪ್ಪೆ, ಹೊಸೂರು, ಮಾದಳ್ಳಿಮಠ, ಹೊಸಪುರ, ನಾಡಪ್ಪನಹಳ್ಳಿ, ದ್ಯಾತನಕೆರೆ ಕಾವಲ್, ಹಳೇಪುರ, ತಿಪ್ಪೂರು, ಗಾಗೇನಹಳ್ಳಿ, ಈರನದಾಸಿಕೊಪ್ಪಲು, ನಂಜಮ್ಮನಕೊಪ್ಪಲು, ಚಾಲಹಳ್ಳಿ, ಬೆಂಕಿಪುರ, ಅಣ್ಣರಾಯನಪುರ, ಹಳ್ಳಿಕೆರೆ, ಗೋಹಳ್ಳಿ, ಒಡೆಯರ ಹೊಸಹಳ್ಳಿ, ಶಂಖಹಳ್ಳಿ, ಹರದನಹಳ್ಳಿ, ಅಸ್ವಾಳು, ಎಚ್.ಡಿ.ಕೋಟೆ ತಾಲ್ಲೂಕಿನ ಕೊತ್ತೇಗಾಲ, ತೋಟದಹಳ್ಳಿಯ ಕೆರೆ–ಕಟ್ಟೆಗಳು ಜಲಸಮೃದ್ಧಿಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.