ಮನೆ ರಾಜ್ಯ ಚಾಲನೆಗೊಂಡ ಕೆಲವೇ ಕ್ಷಣಗಳಲ್ಲಿ ಹಳಿ ತಪ್ಪಿದ ಪುಟಾಣಿ ರೈಲು: ಅಧಿಕಾರಿಗಳನ್ನು ತೆಗೆದುಕೊಂಡ ಪ್ರಹ್ಲಾದ ಜೋಶಿ

ಚಾಲನೆಗೊಂಡ ಕೆಲವೇ ಕ್ಷಣಗಳಲ್ಲಿ ಹಳಿ ತಪ್ಪಿದ ಪುಟಾಣಿ ರೈಲು: ಅಧಿಕಾರಿಗಳನ್ನು ತೆಗೆದುಕೊಂಡ ಪ್ರಹ್ಲಾದ ಜೋಶಿ

0

ಹುಬ್ಬಳ್ಳಿ (Hubballi)-ಸ್ಮಾರ್ಟ್‌ ಸಿಟಿ ಯೋಜನೆಯಡಿ 4.2 ಕೋಟಿ ರೂ. ವೆಚ್ಚದಲ್ಲಿ ಇಲ್ಲಿಯ ಇಂದಿರಾ ಗಾಂಧಿ ಗಾಜಿನ ಮನೆಯಲ್ಲಿ ಸ್ಥಾಪಿಸಲಾದ ಪುಟಾಣಿ ರೈಲು ಉದ್ಘಾಟನೆಗೊಂಡ ಕೆಲವೇ ಕ್ಷಣಗಳಲ್ಲಿ ಹಳಿ ತಪ್ಪಿದ ಘಟನೆ ನಡೆದಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ (pralhad joshi), ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadessh Shettar) ಸೇರಿದಂತೆ ಅನೇಕ ಗಣ್ಯರು ಈ ರೈಲಿಗೆ ಶನಿವಾರ ಚಾಲನೆ ನೀಡಿ ಇದೇ ರೈಲಿನಲ್ಲಿ ಮೊದಲ ಪ್ರಯಾಣ ಮಾಡಲು ಗಣ್ಯರು ಹತ್ತಿದ್ದರು. ರೈಲು ಕೇವಲ 100 ಮೀಟರ್ ಚಲಿಸುತ್ತಿದ್ದಂತೆ ಹಳಿ ತಪ್ಪಿದ್ದು, ರೈಲಿನ ವೇಗ ಕಡಿಮೆ ಇದ್ದ ಕಾರಣ ಅದೃಷ್ಟವಶಾತ್‌ ಯಾರಿಗೂ ಏನೂ ಆಗಿಲ್ಲ.

ರೈಲು ಹಳಿ ತಪ್ಪುತ್ತಿದ್ದಂತೆ ರೈಲು ನಿಲ್ಲಿಸಿದ್ದು, ಮೊದಲನೇ ಬೋಗಿಯಲ್ಲಿದ್ದ ಜೋಶಿ ಮತ್ತು ಶೆಟ್ಟರ್ ಹಾಗೂ ಗಣ್ಯರನ್ನು ಅಲ್ಲಿದ್ದ ಬೆಂಬಲಿಗರು ಮತ್ತು ಪೊಲೀಸ್ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸಿದರು. ಬಳಿಕ ಕೆಲಹೊತ್ತು ಅದನ್ನು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನೂತನ ಬೈಪಾಸ್‌ ರಸ್ತೆಗೆ ತಾಂತ್ರಿಕ ಒಪ್ಪಿಗೆ

ರಾಮನಗರ(ಅಳ್ನಾವರ)-ಧಾರವಾಡ-ನವಲಗುಂದ-ಗದಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನಾಗಿಸಿ ಭಾರತಮಾಲಾ 2 ರಡಿಯಲ್ಲಿಅಭಿವೃದ್ಧಿ ಪಡಿಸಲಾಗುವುದು. ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ.

ಉಪರಾಜ್ಯ ಸಾರಿಗೆ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಹಂತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಸ್ತೆ ನಿರ್ಮಾಣಕ್ಕೆ ತಾಂತ್ರಿಕೆ ಒಪ್ಪಿಗೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆಯನ್ನು ಆರು ಪಥಗಳಿಂದ ಎಂಟು ಪಥಗಳಿಗೆ ಹೆಚ್ಚಿಸಲು ಒಪ್ಪಿಗೆ ದೊರೆತಿದೆ. ಟೆಂಡರ್‌ ಪ್ರಕ್ರಿಯೇ ವಿಳಂಬವಾಗಿದ್ದು, ಶೀಘ್ರದಲ್ಲಿ ಪ್ರಾರಂಭಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮೈಸೂರು, ಮಂಗಳೂರಿಗೂ ವಿಮಾನ ಸೇವೆ

ರೈಲು, ವಿಮಾನ ಹಾಗೂ ಹೆದ್ದಾರಿಗಳ ಉನ್ನತೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ಹೈದರಾಬಾದ್‌ ವಿಮಾನ ಸಂಚಾರ ಪ್ರಾರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಮಂಗಳೂರು ಮತ್ತು ಮೈಸೂರಿಗೂ ವಿಮಾನಯಾನ ಪ್ರಾರಂಭವಾಗಲಿದೆ. ಜನ ಸಂಚಾರದ ಪ್ರತಿಕ್ರಿಯೆ ಆಧರಿಸಿ ವಾರದ ಏಳು ದಿನಗಳಿಗೂ ಸೇವೆ ವಿಸ್ತರಿಸಲು ಇಂಡಿಗೋ ಆಡಳಿತ ಮಂಡಳಿಗೆ ತಿಳಿಸಲಾಗಿದೆ ಎಂದರು.

ಹಿಂದಿನ ಲೇಖನಪಿಎಸ್ಐ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ದಿನೇಶ್‌ ಗುಂಡೂರಾವ್‌ ಬಿಡುಗಡೆ ಮಾಡಲಿ: ಹೆಚ್ಡಿಕೆ
ಮುಂದಿನ ಲೇಖನ6 ತಿಂಗಳಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಆಯುಷ್ಮಾನ್ ಕಾರ್ಡ್ ವಿತರಿಸಿ: ಸಚಿವ ಸುಧಾಕರ್‌