ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪನ ಗುಡಿಯ ಹಿಂಭಾಗದಲ್ಲಿರುವ ದೇವಾಲಯವೇ ಬಾಲಾಂಜನೇಯ ಸ್ವಾಮಿ ದೇವಾಲಯ. ಈ ದೇವಾಲಯ ಇತ್ತೀಚೆಗೆ ಅಂದರೆ ಸುಮಾರು 20 ವರ್ಷಗಳ ಹಿಂದಷ್ಟೇ ನಿರ್ಮಾಣವಾದದ್ದು.
ಈ ದೇವಾಲಯದಲ್ಲಿರುವ ಆಂಜನೇಯಸ್ವಾಮಿ ಬಂಡೆಯಲ್ಲಿ ಸ್ವಯಂ ರೂಪು ತಳೆದ ಕಾರಣ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ.
ದೊಡ್ಡಗಣಪ, ದೊಡ್ಡ ಬಸವ ನೆಲೆನಿಂತ ಈ ಪುಣ್ಯ ಕ್ಷೇತ್ರ ಬೆಟ್ಟ ಗುಡ್ಡ, ಕಲ್ಲುಗಳಿಂದ ಆವರಿಸಲ್ಪಟ್ಟ ಸ್ಥಳ. ಇಲ್ಲಿ ಗಣಪತಿಯ ಗರ್ಭಗೃಹದ ಹಿಂಭಾಗದ ಬಂಡೆಯೊಂದರಲ್ಲಿ ಹನುಮಂತನ ಆಕೃತಿ ಮೂಡಿದ್ದನ್ನು ಗಮನಿಸಿದ ದೇವಾಲಯ ಮಂಡಳಿ ಇಲ್ಲಿ ಸುಂದರವಾದ ದೇವಾಲಯ ನಿರ್ಮಿಸಿದೆ.
ಪ್ರತಿ ನಿತ್ಯ ಇಲ್ಲಿ ಆಂಜನೇಯಸ್ವಾಮಿಗೆ 108 ವಿಳ್ಳೆದೆಲೆಯ ಅಲಂಕಾರ ಮಾಡಿ, ಪುಷ್ಪಗಳಿಂದ ಸಿಂಗರಿಸಲಾಗುತ್ತದೆ. ಪ್ರತಿ ಶನಿವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಶನಿವಾರಗಳಲ್ಲಿ ದೇವರಿಗೆ ಬೆಣ್ಣೆ ಅಲಂಕಾರ ಮಾಡುವುದು ಇಲ್ಲಿನ ವಿಶೇಷ.
ನವರಾತ್ರಿಯ ಸಮಯದಲ್ಲಿ ಹತ್ತೂ ದಿನಗಳ ಕಾಲ ಆಂಜನೇಯಸ್ವಾಮಿಗೆ ಶ್ರೀಗಂಧ, ಕುಂಕುಮ, ಹರಿಶಿನ, ಚಂದನವೇ ಮೊದಲಾದ ದ್ರವ್ಯಗಳಿಂದ ಅಲಂಕರಿಸಲಾಗುತ್ತದೆ. ದೇವಾಲಯಕ್ಕೆ ನಿರ್ಮಿಸಲಾಗಿರುವ ಸುಂದರ ದೇವಾಲಯದ ಮೇಲೆ ಗೋಪುರವಿದ್ದು, ಗೋಪುರದಲ್ಲಿ ಧ್ಯಾನ ಮಗ್ನನಾಗಿ ಕುಳಿತ ಆಂಜನೇಯಸ್ವಾಮಿಯ ಮೂರ್ತಿಯಿದೆ.
ಈ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ದೇವಾಲಯದ ಎದುರು ಶ್ರೀ ವಾಲ್ಮೀಕಿ ಆಶ್ರಮವಿದ್ದು, ಪಕ್ಕದಲ್ಲಿ ಬೇಡರ ಕಣ್ಣಪ್ಪನ ಗುಡಿ ಇದೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.