ಮನೆ ಕ್ರೀಡೆ ಪಂದ್ಯ ಗೆದ್ದರೂ ಬ್ಯಾಟರ್ ಗಳ ವಿರುದ್ಧ ಅಸಮಾಧಾನ ತೋರಿದ ಗುಜರಾತ್ ಟೈಟಾನ್ಸ್  ತಂಡದ ನಾಯಕ ಪಾಂಡ್ಯ

ಪಂದ್ಯ ಗೆದ್ದರೂ ಬ್ಯಾಟರ್ ಗಳ ವಿರುದ್ಧ ಅಸಮಾಧಾನ ತೋರಿದ ಗುಜರಾತ್ ಟೈಟಾನ್ಸ್  ತಂಡದ ನಾಯಕ ಪಾಂಡ್ಯ

0

ಮೊಹಾಲಿ: ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರದ ಐಪಿಎಲ್ ಪಂದ್ಯ ಗೆದ್ದ ಗುಜರಾತ್ ಟೈಟಾನ್ಸ್ ಮತ್ತೆ ಗೆಲುವಿನ ನಗೆಬೀರಿದೆ. 154 ರನ್ ಗುರಿ ಪಡೆದಿದ್ದ ಗುಜರಾತ್ ಟೈಟಾನ್ಸ್ ತಂಡವು ಕೊನೆಯ ಓವರ್ ನಲ್ಲಿ ಜಯ ಸಾಧಿಸಿತು.

Join Our Whatsapp Group

ಗುಜರಾತ್ ಪರ ಶುಭ್ಮನ್ ಗಿಲ್ ಅವರು 67 ರನ್ ಗಳಿಸಿ ಮತ್ತು ವೃದ್ಧಿಮಾನ್ ಸಾಹ ಅವರು 30 ರನ್ ಮಾಡಿ ನೆರವಾದರು. ಕೊನೆಯ ಓವರ್ ನಲ್ಲಿ ರಾಹುಲ್ ತಿವಾಟಿಯಾ ಅವರು ಬೌಂಡರಿ ಮೂಲಕ ತಂಡವನ್ನು ಗೆಲವಿನ ಗಡಿ ದಾಟಿಸಿದರು.

ಕೊನೆಯ ಓವರ್ ನಲ್ಲಿ ಗುಜರಾತ್ ಗೆಲುವಿಗೆ ಏಳು ರನ್ ಅಗತ್ಯವಿತ್ತು. ಆದರೆ ಎರಡನೇ ಎಸೆತದಲ್ಲಿ ಗಿಲ್ ಔಟಾದಾಗ ಗುಜರಾತ್ ಒತ್ತಡಕ್ಕೆ ಸಿಲುಕಿತ್ತು. ಆದರೆ ಐದನೇ ಎಸೆತದಲ್ಲಿ ತಿವಾಟಿಯಾ ಬೌಂಡರಿ ಬಾರಿಸಿ ಗೆಲುವು ತಂದಿತ್ತರು.

ಆದರೆ ಗೆಲುವಿನ ಬಳಿಕವೂ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಬ್ಯಾಟರ್ ಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ಯಲು ತಾನು ಯಾವತ್ತೂ ಇಚ್ಚಿಸುವುದಿಲ್ಲ ಎಂದಿದ್ದಾರೆ.

 “ಇದು ನುಂಗಲು ಕಠಿಣ ಮಾತ್ರೆಯಾಗಿದೆ. ಕೊನೆಯ ಓವರ್ ಗೆ ಆಟವನ್ನು ಕೊಂಡೊಯ್ಯುವ ಬಗ್ಗೆ ನಾನು ದೊಡ್ಡ ಅಭಿಮಾನಿಯಲ್ಲ” ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ಗುರುವಾರದ ಗೆಲುವು ಗುಜರಾತ್ ನ ಸೀಸನ್ ಮೂರನೇ ಗೆಲುವು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.