ಮನೆ ಜ್ಯೋತಿಷ್ಯ ಮಂಡ್ಯದಲ್ಲಿ ಶ್ವಾನ ಭವಿಷ್ಯ: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ?

ಮಂಡ್ಯದಲ್ಲಿ ಶ್ವಾನ ಭವಿಷ್ಯ: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ?

0

ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆ 15 ದಿನ ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ ಮುಂದೆ ಯಾವ ಸರ್ಕಾರ ಬರಬಹುದು ಎಂದು ಹಲವಾರು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Join Our Whatsapp Group

ಮಂಡ್ಯದ ಅಶೋಕ್ ನಗರದ ಗೋಪಿ ಎನ್ನುವವರ ಭೈರವ ಹೆಸರಿನ ಶ್ವಾನವು ಕರ್ನಾಟಕದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಕರ್ನಾಟಕದ ಮುಂದಿನ ಸಿಎಂ ಆಗುವ ಯೋಗವಿದೆ ಎಂಬ ಭವಿಷ್ಯ ನುಡಿದಿದೆ.

ಭೈರವ ಶ್ವಾನವನ್ನು ಸಾಕಿರುವ ಗೋಪಿ ಅವರು ಕಾಲಭೈರವನ ಭಕ್ತರಾಗಿದ್ದು, ಪ್ರತಿ ಸೋಮವಾರ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಗೋಪಿ ಅವರು ಭೈರವನಿಗೆ ಕೇಳಿದ್ದಾರೆ.

ಈ ವೇಳೆ ಬಸವರಾಜ ಬೊಮ್ಮಾಯಿ, ಎಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಅವರ ಫೋಟೋಗಳನ್ನು ಇಡಲಾಗಿತ್ತು. ಆ ಮೂರು ಫೋಟೋಗಳಲ್ಲಿ ಎಚ್ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಶ್ವಾನ ಬಾಯಿಯಿಂದ ಕಚ್ಚಿ ತೆಗೆದುಕೊಟ್ಟಿದೆ.

ಕಳೆದ ಎರಡು ವರ್ಷಗಳಿಂದ ಭೈರವ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆ ಎನ್ನಲಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭೈರವನ ಭವಿಷ್ಯ ನಿಜವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

Join Our Whatsapp Group