ಮನೆ ರಾಷ್ಟ್ರೀಯ ಕರ್ನಾಟಕವನ್ನು ಭಾರತದಿಂದ ಬೇರ್ಪಡಿಸಲು ಕಾಂಗ್ರೆಸ್ ಹುನ್ನಾರ: ನಂಜನಗೂಡಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ

ಕರ್ನಾಟಕವನ್ನು ಭಾರತದಿಂದ ಬೇರ್ಪಡಿಸಲು ಕಾಂಗ್ರೆಸ್ ಹುನ್ನಾರ: ನಂಜನಗೂಡಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ

0

ಕಾಂಗ್ರೆಸ್ ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕ ಮಾಡಲು ಹವಣಿಸುತ್ತಿದೆ. ಅದು ದೇಶದ ಸಮಗ್ರತೆಗೆ ಸವಾಲಾಗಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ನಂಜನಗೂಡಿನಲ್ಲಿ ಭಾನುವಾರ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಪ್ರಚಾರ ಭಾಷಣ ಮಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಒಂದು ಹಂತದಲ್ಲಂತೂ ಅವರು ತೀರ ಭಾವುಕರಾಗಿ ಮಾತನಾಡಿದರು.

Join Our Whatsapp Group

ಕಾಂಗ್ರಸ್ ದೇಶದ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಭಾರತದ ಆಢಳಿತದಲ್ಲಿ ವಿದೇಶಿಗರು ಮೂಗು ತೂರಿಸುವುದು ಬೇಕಿಲ್ಲ. ಆದರೆ ಕಾಂಗ್ರೆಸ್ ನ ಕೆಲ ಮುಖಂಡರು ಗುಪ್ತವಾಗಿ ವಿದೇಶಿ ಶಕ್ತಿಗಳೊಂದಿಗೆ ಮಾತನಾಡುತ್ತಾರೆ. ವಿದೇಶಿ ಶಕ್ತಿಗಳೊಂದಿಗೆ ಕಾಂಗ್ರೆಸ್ ಕುಟುಂಬ ಕೈಜೋಡಿಸಿದೆ ಎಂದು ಹರಿಹಾಯ್ದರು.


ಕರ್ನಾಟಕದ ಸಾರ್ವಭೌಮತೆ ಅಂದರೆ ಅದರರ್ಥವೇನು?

ಕಾಂಗ್ರೆಸ್ ಮುಖಂಡರು ಬಾಯಿ ತೆರೆದರೆ ಕರ್ನಾಟಕದ ಸಾರ್ವಭೌಮತೆಯನ್ನು ರಕ್ಷಿಸುವುದಾಗಿ ಹೇಳುತ್ತಾರೆ. ಇದರ ಅರ್ಥವೇನು ಎಂದು ನಿಮಗೆ ಗೊತ್ತಾ? ಎಷ್ಟು ಮಂದಿ ಸಂಸತ್ತಿನಲ್ಲಿ ಕುಳಿತಿದ್ದಾರೋ ಅವರೆಲ್ಲರೂ ಸಂವಿಧಾನವು ಹೇಳಿರುವ ಭಾರತದ ಸಾರ್ವಭೌಮತ್ವವನ್ನು ಕಾಪಾಡುವುದಾಗಿ ಪ್ರಮಾಣ ಮಾಡುತ್ತಾರೆ. ಯಾವ ದೇಶವು ಸ್ವಾತಂತ್ರ್ಯವನ್ನು ಪಡೆಯುತ್ತದೆಯೋ ಅದನ್ನು ಸಾರ್ವಭೌಮ ರಾಷ್ಟ್ರ ಎಂದು ಕರೆಯುತ್ತೇವೆ ಎಂದರು.

ಕಾಂಗ್ರೆಸ್ ಕರ್ನಾಟಕವನ್ನು ಪ್ರತ್ಯೇಕವಾಗಿ ನೋಡುತ್ತಿದೆ

ಮುಂದುವರಿದು ಕಾಂಗ್ರೆಸ್ ನ ಈ ಹೇಳಿಕೆಯ ಅರ್ಥ ಏನೆಂದರೆ ಅದು ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕವಾಗಿ ನೋಡುತ್ತಿದೆ. ಅದು ಮರ್ಯಾದೆಯ ಎಲ್ಲಾ ಸರಹದ್ದುಗಳನ್ನು ದಾಟಿ ಹೋಗಿದೆ. ದೇಶದ ಜನರ ಭಾವನೆಗಳನ್ನು ಕೆದಕಿದೆ. ಇದು ನಿಮಗೆ ಒಪ್ಪಿಗೆಯೋ? ಈ ರೀತಿ ಹೇಳುತ್ತಿರುವ ಕಾಂಗ್ರೆಸ್ ಗೆ ಶಿಕ್ಷೆ ಕೊಡುತ್ತೀರೋ ಇಲ್ಲವೋ ಹೇಳಿ ಎಂದು ಎಂದು ಸಭಿಕರನ್ನು ಪ್ರಶ್ನಿಸಿದರು. ಇವರು ಇಲ್ಲಿ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕ ಮಾಡಲು ಬಯಸುತ್ತಿದ್ದಾರೆ. ಇದು ಟುಕ್ಡೇ ಟುಕ್ಡೇ ಗ್ಯಾಂಗಿನ ರೋಗ ಕಾಂಗ್ರೆಸ್ ಅನ್ನು ಇಲ್ಲಿವರೆಗೆ ಕರೆದೊಯ್ಯತ್ತದೆ ಎಂದು ನಾನು ಯೋಚಿಸಿಯೂ ಇರಲಿಲ್ಲ . ಈ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಲಕ್ಷಾಂತರ ಕನ್ನಡಿಗರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಕಾಂಗ್ರೆಸ್ ಕೋಟ್ಯಂತರ ಕನ್ನಡಿಗರ ದೇಶಭಕ್ತಿಗೆ ಅವಮಾನ ಮಾಡುತ್ತಿದೆ ಎಂದು ಕುಟುಕಿದರು.

ಮೋದಿಯಿಂದ ನಾಡಗೀತೆಯ ಉಲ್ಲೇಖ

ಕರ್ನಾಟಕವು ಭಾರತ ದೇಶದ ಅವಿಭಾಜ್ಯ ಅಂಗ ಎಂಬುದನ್ನು ಈ ಮಣ್ಣಿನಲ್ಲಿ ಹುಟ್ಟಿದ ರಾಷ್ಟ್ರಕವಿ ಕುವೆಂಪು ಸ್ಪಷ್ಟವಾಗಿ ಹೇಳಿದ್ದರು. `ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಎಂಬ ಕುವೆಂಪು ಅವರ ನಾಡಗೀತೆಯ ಅರ್ಥವೇನು? ಕರ್ನಾಟಕ ವು ಪ್ರತಿಯೊಬ್ಬ ಕನ್ನಡಿಗನಿಗೂ ತಾಯಿ. ಆ ತಾಯಿಯನ್ನು ಭಾರತ ಮಾತೆಯ ಸುಪುತ್ರಿ ಎಂದು ಬಣ್ಣಿಸಲಾಗಿದೆ. ಕಾಂಗ್ರೆಸ್ ಇಲ್ಲಿನ ಸಂಸ್ಕೃತಿ ಮತ್ತು ಗೌರವಕ್ಕೆ ಅವಮಾನ ಮಾಡಿದೆ. ಇದುವೇ ಕಾಂಗ್ರೆಸ್ ನ ಇತಿಹಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.