ಮನೆ ರಾಜಕೀಯ ಚುನಾವಣಾ ಆಯೋಗದ ಉಲ್ಲಂಘನೆ: ಸಿದ್ದರಾಮಯ್ಯ ಬಲಗೈತೋರು ಬೆರಳಿಗೆ ಶಾಯಿ

ಚುನಾವಣಾ ಆಯೋಗದ ಉಲ್ಲಂಘನೆ: ಸಿದ್ದರಾಮಯ್ಯ ಬಲಗೈತೋರು ಬೆರಳಿಗೆ ಶಾಯಿ

0

ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹುಟ್ಟೂರಿನ ಸಿದ್ದರಾಮನ ಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನವನ್ನು ಮಾಡಿದರು.

ಸಿದ್ದರಾಮಯ್ಯರವರಿಗೆ ಮತಗಟ್ಟೆ ಸಿಬ್ಬಂದಿ ಬಲಗೈತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿದ್ದಾರೆ. ಚುನಾವಣಾ ಆಯೋಗದ ಹೇಳಿಕೆ ಪ್ರಕಾರ ವ್ಯಕ್ತಿಯ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಬೇಕಿತ್ತು. ಆದರೆ ಸಿದ್ದರಾಮಯ್ಯರವರ ಬಲಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿರುವುದು ವಿವಾದವನ್ನು ಸೃಷ್ಟಿಸಿದೆ. ಬಲಗೈಗೆ ಅಳಿಸಲಾಗದ ಶಾಯಿಯನ್ನು ಹಾಕುವ ಮೂಲಕ ಚುನಾವಣಾ ಆಯೋಗದ ಹೇಳಿಕೆಯನ್ನು ಮತಗಟ್ಟೆ ಸಿಬ್ಬಂದಿ ಉಲ್ಲಂಘಿಸಿದ್ದಾರೆ.