ಮನೆ ಅಪರಾಧ ಮಹಿಳೆಯನ್ನು ಟೊಮೆಟೊ ಎಂದು ಚುಡಾಯಿಸಿದ್ದಕ್ಕೆ ವೃದ್ಧನ ಕೊಲೆ

ಮಹಿಳೆಯನ್ನು ಟೊಮೆಟೊ ಎಂದು ಚುಡಾಯಿಸಿದ್ದಕ್ಕೆ ವೃದ್ಧನ ಕೊಲೆ

0

ಮುಂಗೇರ್​(ಬಿಹಾರ): ಮಹಿಳೆಗೆ ಟೊಮೆಟೊ ಎಂದು ಚುಡಾಯಿಸಿದ ನೆರೆಮನೆಯ ವೃದ್ಧನನ್ನು ಮಹಿಳೆಯ ಪತಿ ಕೊಲೆ ಮಾಡಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ವಿವರ:

ನೆರೆ ಮನೆಯಲ್ಲಿ ವಾಸವಾಗಿದ್ದ ಮಹೇಶ್ ದಾಸ್ ಎಂಬಾತ ಟೊಮೆಟೊ ಎಂದು ಚುಡಾಯಿಸುತ್ತಿದ್ದನೆಂದು ಬ್ರಹ್ಮದೇವ್ ದಾಸ್​ನ ಮುಂದೆ ಆತನ ಪತ್ನಿ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡಿರುವ ಪತಿ ವೃದ್ಧನನ್ನ ನಿಂದಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಮಹೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ಪ್ರಜ್ಞೆ ತಪ್ಪಿಬಿದ್ದಿರುವ ಮಹೇಶ್​ನನ್ನು ವೈದ್ಯರ ಬಳಿ ಕರೆದೊಯ್ಯಲಾಗಿದೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಬ್ರಹ್ಮದೇವ್ ದಾಸ್ ಕುಟುಂಬದ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಮಹಿಳೆಯರ ಬಂಧನ ಮಾಡಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ.  ಬ್ರಹ್ಮದೇವ್ ದಾಸ್, ದಿಲೀಪ್ ದಾಸ್, ಆಕಾಶ್ ದಾಸ್, ಪೂಜಾ ದೇವಿ, ಪೂನಂ ದೇವಿ, ಸುಬೋಧ್ ದಾಸ್ ಮತ್ತು ಅವರ ಪತ್ನಿ ಹೆಸರು ಪ್ರಕರಣದಲ್ಲಿ ಉಲ್ಲೇಖವಾಗಿದೆ. ಬ್ರಹ್ಮದೇವ್ ಕೊಲೆ ಕೇಸ್​ವೊಂದರಲ್ಲಿ ಈಗಾಗಲೇ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿದ್ದಾನೆಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯ ದೇಹದ ಯಾವುದೇ ಭಾಗದಲ್ಲೂ ಗಾಯವಾಗಿರುವ ಗುರುತುಗಳಿಲ್ಲ. ಆತ ಜಗಳದ ಭಯದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿದುಬರಲಿದೆ.