ಮನೆ ಮನರಂಜನೆ ಕನ್ನಡ ಚಿತ್ರರಂಗದ ನಿರ್ಮಾಪಕ ವಿತರಕ ಕೆ ಸಿ ಎನ್ ಮೋಹನ್ ನಿಧನ

ಕನ್ನಡ ಚಿತ್ರರಂಗದ ನಿರ್ಮಾಪಕ ವಿತರಕ ಕೆ ಸಿ ಎನ್ ಮೋಹನ್ ನಿಧನ

0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ವಿತರಕ ಕೆ.ಸಿ.ಎನ್ ಮೋಹನ್ ಭಾನುವಾರ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

Join Our Whatsapp Group

 ಕಿಡ್ನಿ ವೈಫಲ್ಯದಿಂದ  ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮಧ್ಯಾನ 12 ಗಂಟೆ ವೇಳೆಗೆ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ಚಾಮರಾಜಪೇಟೆಯ ಚಿತರಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.

 ಡಾಕ್ಟರ್ ರಾಜಕುಮಾರ್ ಅವರ ಹಲವು ಜನಪ್ರಿಯ ಸಿನಿಮಾಗಳ ನಿರ್ಮಾಪಕ ಕೆ.ಸಿ ಎನ್ ಗೌಡರ ಪುತ್ರರಾಗಿದ್ದ ಮೋಹನ್, ನವರಂಗ್, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದರು.  ಜೊತೆಗೆ ತಾವು ಕೂಡ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದರು ಅಲ್ಲದೆ ಚಿತ್ರ ವಿತರಣೆ ಉದ್ಯಮದಲ್ಲಿಯೂ ಸಕ್ರಿಯರಾಗಿದ್ದರು.

 ರಮ್ಯಾ ದಿವ್ಯ ಸ್ಪಂದನ ನಟನೆಯ ಜೂಲಿ ಸಿನಿಮಾ ವನ್ನು ಮೋಹ ನಿರ್ಮಿಸಿದ್ದರು ಅವರ ಪತ್ನಿ ಪೂರ್ಣಿಮಾ ಈ ಚಿತ್ರವನ್ನು ನಿರ್ದೇಶಸಿದರು. ರಾಮರಾಜ್ಯದಲ್ಲಿ ರಾಕ್ಷಸರು, ಜಯಸಿಂಹ, ಧರ್ಮ ಯುದ್ಧ, ಶಂಕರ್ ನಾಗ್ ನಟನೆ ಬಲೆ ಚತುರ ಮುಂತಾದ ಸಿನಿಮಾಗಳನ್ನು ಕೆ.ಸಿ.ಎನ್ ಮೋಹನ್ ಅವರು ನಿರ್ಮಾಣ ಮಾಡಿದ್ದರು.

 ಅಮೃತರು ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಪತ್ನಿ ಪೂರ್ಣಿಮಾ ಕೆಲ ವರ್ಷಗಳ ಹಿಂದೆ ಹೃದಯಘಾತದಿಂದ ಮೃತಪಟ್ಟಿದ್ದರು.