ಮನೆ ರಾಜಕೀಯ ಸಿಎಂ ಮಾತಾಡುವ ಬಸವಣ್ಣ ಅಲ್ಲ, ದುಡಿಯುವ ಬಸವಣ್ಣ:  ಪ್ರತಾಪ್ ಸಿಂಹ

ಸಿಎಂ ಮಾತಾಡುವ ಬಸವಣ್ಣ ಅಲ್ಲ, ದುಡಿಯುವ ಬಸವಣ್ಣ:  ಪ್ರತಾಪ್ ಸಿಂಹ

0

ಮೈಸೂರು(Mysuru):  ರಾಜ್ಯದ ಮುಖ್ಯಮಂತ್ರಿ ಮಾತಾಡುವ ಬಸವಣ್ಣ. ಅಲ್ಲ ದುಡಿಯುವ ಬಸವಣ್ಣ ಎಂದು ಸಂಸದ ಪ್ರತಾಪ್ ಸಿಂಹ(Prathap Simha) ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಹಿಜಾಬ್ , ಹಲಾಲ್,  ಅಜಾನ್  ನಿರ್ಬಂಧ ವಿಚಾರದಲ್ಲಿ ಸಿಎಂ ಮೌನ ವಹಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಮೈಸೂರು ಏರ್ ಪೋರ್ಟ್ ವಿಸ್ತರಣೆಗೆ ಅನುದಾನ, ಕೆ.ಆರ್ ಆಸ್ಪತ್ರೆಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ.  ಮೈಸೂರಿನ ಶಕ್ತಿದಾಮಕ್ಕೆ 5 ಕೋಟಿ ಅನುದಾನ ನೀಡಿದ್ದಾರೆ. ನಿತ್ಯ ಕರ್ಕಶ ಧನಿಯಲ್ಲಿ ಮಾತನಾಡುವವರಿಗೆ ಅರ್ಥವಾಗಲ್ಲ ಎಂದು ವಿಪಕ್ಷ ನಾಯಕರಿಗೆ ಕುಟುಕಿದರು.

ಹೆಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿಕೆಗೆ ಯಾವುದೇ ಆಧಾರ ಇಲ್ಲ. ಅವರ ಹೇಳಿಕೆ ಗಂಭಿರವಾಗಿ ತೆಗೆದುಕೊಳ್ಳಬೇಡಿ.  ಕುಮಾರಸ್ವಾಮಿ ಸಿದ್ಧರಾಮಯ್ಯ ಕೋಡಿ ಮಠದಸ್ವಾಮಿ ಇವರ ಹೇಳಿಕೆಗೆ ನಿಖರತೆ ಸ್ಪಷ್ಟತೆ ಇಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.