ಬೆಂಗಳೂರು(Bengaluru): ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಂಘಟನೆಗಾಗಿ ಬಿಜೆಪಿ ನಾಯಕರು ಏಪ್ರಿಲ್ 12 ರಿಂದ ಮೂರು ತಂಡಗಳಾಗಿ ರಾಜ್ಯ ಪ್ರವಾಸ(State tour) ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಏ.12 ರಿಂದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಮೊದಲ ತಂಡ, 2ನೇ ತಂಡ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 3ನೇ ತಂಡ ಪ್ರವಾಸ ಕೈಗೊಳ್ಳಲಿದೆ.
ಬೆಂಗಳೂರು ಮೈಸೂರು ದಾವಣಗೆರೆ ಕಟೀಲ್ ತಂಡ ಬೆಂಗಳೂರು ಗ್ರಾಮಾಂತರ, ಬೆಳಗಾವಿ ಬಳ್ಳಾರಿಯಲ್ಲಿ ಅರುಣ್ ಸಿಂಗ್ ತಂಡ ಮಂಗಳೂರು ಶಿವಮೊಗ್ಗ ಕಲಬುರುಗಿಯಲ್ಲಿ ಸಿಎಂ ಬೊಮ್ಮಾಯಿ ತಂಡ ಪ್ರವಾಸ ನಡೆಸಲಿದೆ. ಸರ್ಕಾರದ ಸಾಧನೆಗಳನ್ನ ಪ್ರಚಾರ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.