ಮನೆ Uncategorized ರಾಜ್ಯಪಾಲರನ್ನೇಕೆ, ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ: ನಳೀನ್ ಕುಮಾರ್ ಕಟೀಲ್

ರಾಜ್ಯಪಾಲರನ್ನೇಕೆ, ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ: ನಳೀನ್ ಕುಮಾರ್ ಕಟೀಲ್

0

ಮೈಸೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಇಂದು ರಾಜ್ಯಪಾಲರ ಭೇಟಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯಪಾಲರನ್ನೇಕೆ ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ ಎಂದು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಮೊದಲಿಂದ ಚಿಕ್ಕ ಚಿಕ್ಕ  ವಿಚಾರಕ್ಕೆ ರಾಜೀನಾಮೆ ಕೇಳುತ್ತಲೆ ಇದ್ದಾರೆ. ಅವರು ಕೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಲು ಆಗಲ್ಲ ಎಂದು ಹೇಳಿದರು.

ಗಣಪತಿ ಕೇಸ್ ಬೇರೆ, ಆ ಕೇಸ್ ಆದ 7 ತಿಂಗಳ ನಂತರ ಜಾರ್ಜ್ ರಾಜೀನಾಮೆ ಕೊಟ್ಟಿದ್ದರು. ಈ ಕೇಸ್ ನಲ್ಲಿ ನಾವು ಘಟನೆ ನಡೆದ ತಕ್ಷಣ ತನಿಖೆಗೆ ಆದೇಶಿಸಿದ್ದೇವೆ. ಈಶ್ವರಪ್ಪ ರಾಜೀನಾಮೆ ಪಡೆಯುವ ಸ್ಥಿತಿ ಈಗ ನಿರ್ಮಾಣವಾಗಿಲ್ಲ. ತನಿಖೆ ನಡೆಯಲಿ, ಯಾರೇ ತಪ್ಪಿತಸ್ಥ ರು ಇದ್ದರು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರ. ಅದು ಸಿಎಂಗೆ ಬಿಟ್ಟ ವಿಚಾರ. ರಾಜ್ಯಾಧಕ್ಷನಾಗಿ ನಾನು ನನ್ನ ಹೇಳಿಕೆ ತಿಳಿಸಿದ್ದೇನೆ. ಸಿಎಂ ಗೆ ಈ ಬಗ್ಗೆ ನಾನು ಏನಾದರೂ ಹೇಳುವುದಿದ್ದರೆ ಅವರನ್ನು ಭೇಟಿ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು.