ಮನೆ ಅಪರಾಧ ತುಮಕೂರು: ಲಾಂಗು- ಮಚ್ಚಿನಿಂದ ಯುವಕನ ಮೇಲೆ ಹಲ್ಲೆ

ತುಮಕೂರು: ಲಾಂಗು- ಮಚ್ಚಿನಿಂದ ಯುವಕನ ಮೇಲೆ ಹಲ್ಲೆ

0

ತುಮಕೂರು: ಹಾಡಹಗಲೇ ಕುಣಿಗಲ್ ಪಟ್ಟಣದಲ್ಲಿ ನಡೀತು ಸಿನೆಮಾ ರೀತಿಯಲ್ಲಿ ಲಾಂಗು‌ ಮಚ್ಚಿನಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕುಣಿಗಲ್ ಪಟ್ಟಣದ ಎಲ್’ಐ ಸಿ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಮೇಸ್ತ್ರಿಗೌಡನ ಪಾಳ್ಯದ ಜಗದೀಶ್ ಅಲಿಯಾಸ್ ಜಗ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೂತರಹಳ್ಳಿ ಗ್ರಾಮದ ಆಕಾಶ್, ಚಿಕ್ಕಣ್ಣ, ಶ್ರೀನಿವಾಸ್ ಅವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗದೀಶ್‌ ಅವರನ್ನು ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.