ಮನೆ ಮನರಂಜನೆ “ಬಯಲು ಸೀಮೆ” ಚಿತ್ರ ತೆರೆಗೆ

“ಬಯಲು ಸೀಮೆ” ಚಿತ್ರ ತೆರೆಗೆ

0

ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರುವ “ಬಯಲು ಸೀಮೆ’ ಚಿತ್ರ ಇಂದು ತೆರೆಕಾಣುತ್ತಿದೆ. ಲಕ್ಷ್ಮಣ್‌ ಸಾ ಶಿಂಗ್ರಿ ನಿರ್ಮಾಣದ ಈ ಚಿತ್ರವನ್ನು ವರುಣ್‌ ಕಟ್ಟಿಮನಿ ನಿರ್ದೇಶಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ಟಿ.ಎಸ್‌ ನಾಗಾಭರಣ, ರವಿಶಂಕರ್‌, ಸಂಯುಕ್ತಾ ಹೊರನಾಡು, ಯಶ್‌ ಶೆಟ್ಟಿ, ಭವಾನಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ ಮತ್ತಿತರರು ನಟಿಸಿದ್ದಾರೆ.

ಎಂಭತ್ತರ ದಶಕ ಮತ್ತು ಇವತ್ತಿನ ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಸಾಹೂರಾವ್‌ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ “ಬಯಲು ಸೀಮೆ’ಯ ಕಥೆ ಸಾಗುತ್ತದೆ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್‌ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣದ್ವೇಷ… ಹೀಗೆ ಹತ್ತಾರು ತಿರುವುಗಳು ಸಿನಿಮಾದಲ್ಲಿದೆ ಎನ್ನುವುದು ತಂಡದ ಮಾತು.