ಮನೆ ರಾಜ್ಯ ರಾಮನಗರ: ಕಾಡಾನೆ ದಾಳಿ, ಮೂರು ಎಕರೆ ಬೆಳೆ ನಾಶ

ರಾಮನಗರ: ಕಾಡಾನೆ ದಾಳಿ, ಮೂರು ಎಕರೆ ಬೆಳೆ ನಾಶ

0

ರಾಮನಗರ: ಕಾಡಾನೆಗಳ ದಾಳಿಗೆ ಮೂರು ಎಕರೆಯಲ್ಲಿದ್ದ ಬೆಳೆ ನಾಶವಾದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಉಮೇಶ್ – ತಮ್ಮಣ್ಣ ಎಂಬುವರ ಮಾವಿನ ತೋಟ, ಟೊಮ್ಯಾಟೊ ಬೆಳೆ ಸಂಪೂರ್ಣ ನಾಶವಾಗಿದೆ. ಎರಡು ಎಕರೆಯಲ್ಲಿದ್ದ ಮಾವು, ಒಂದು ಎಕರೆಯಲ್ಲಿದ್ದ ಟೊಮ್ಯಾಟೊ ಬೆಳೆ ಕಾಡಾನೆಗಳ ಪುಂಡಾಟಕ್ಕೆ ಬಲಿಯಾಗಿದೆ.

ತಡರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ ಮಾವಿನ ಮರಗಳನ್ನು ಮುರಿದು, ಟೊಮ್ಯಾಟೊ ಬೆಳೆ ನಾಶ ಮಾಡಿವೆ.

ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.