ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್ : ಯಾಕೋ ಒಂದು ವಾರದಿಂದ ಸ್ಕೂಲಿಗೆ ಬರ್ತಾ ಇಲ್ಲ?

ಬಾಲು : ಹೋದ ಜಾಗಕ್ಕೆ ಮತ್ತೆ ಮತ್ತೆ ಹೋದರೆ ಮರ್ಯಾದೆ ಸಿಗೋಲ್ಲ ಅಂತ ನಮ್ಮಪ್ಪ ಹೇಳಿದ್ದಾರೆ ಮೇಡಂ !

***

ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆಮಾಡಿ ತಲೆಯಲ್ಲಾಡಿಸಿದರು.

“ಏನು ಆಗಿಲ್ವಲ್ಲಯ್ಯ, ಚೆನ್ನಾಗಿಯೇ ಇದ್ದಾರೆ”

 “ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ-ಮಧ್ಯೆ ನಿಲ್ಲಿಸಿ ಬಿಡುತ್ತಾಳೆ.”

“ಏಕೆ ?”

“ಉಸಿರಾಡಲಿಕ್ಕೆ.”

***

ಒಂದು ಸಮಸ್ಯೆಗೆ ಒಬ್ಬನೇ ಏನು ಮಾಡಲಾರ ! ಎಲ್ಲರೂ ಕೂಡಿ ಆ ಸಮಸ್ಯೆಗೆ ಏನು ಮಾಡಲಾಗದೆ ಎಂದು ನಿರ್ಣಯಿಸುವವರು. ಅದೇ ಸಮ್ಮೇಳನ.!

***

ರೋಗಿ : ನೀವು ನನ್ನ ಬಗೆಗೆ ತೋರಿದ ಒಳ್ಳೆತನಕ್ಕೆ ಬೆಲೆ ಕೊಡುವ ಸಾಧ್ಯವೇ ಡಾಕ್ಟರ್ ?

ವೈದ್ಯ : ಯಾಕಿಲ್ಲ ಚೆಕ್, ಮನಿ ಆರ್ಡರ್ ಅಥವಾ ಕ್ಯಾಶ್ ಯಾವುದಾದ್ರೂ ಸರಿ.

***

ಆತ : ನಿಮ್ಮ ಹೆಂಡತಿಯನ್ನು ಹೊಡೆದಿದ್ದಕ್ಕಾಗಿ ನಿಮಗೆ ಜೈಲು ಶಿಕ್ಷೆ ಆದರೆ ನಿಮಗೆ ಏನನಿಸುತ್ತದೆ ?

ಈತ : ಏನನಿಸುತೇ ? ನನ್ನನ್ನು ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ವರ್ಗಾಯಿಸಿದ್ದಾರೆ ಅಂತ.

ಹಿಂದಿನ ಲೇಖನಚಿತ್ತವೃತ್ತಿ (ಮನಸ್ಸಿನ ರೂಪಾಂತರಗಳಿಗೆ ಕಾರಣ)
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ