ಮನೆ ರಾಜ್ಯ ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಆರಂಭ

ದಸರಾ ಗಜಪಡೆಗೆ ಇಂದಿನಿಂದ ತಾಲೀಮು ಆರಂಭ

0

ಮೈಸೂರು: ವಿಶ್ವ ವಿಖ್ಯಾತ ಮೈಸ ದಸರಾ ಮಹೋತ್ಸವ-2023ದ ಹಿನ್ನಲೆ ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದ್ದು, ಇಂದಿನಿಂದ ಗಜಪಡೆಗೆ ತಾಲೀಮು ಆರಂಭಿಸಲಾಗಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ತರಬೇತಿ ನೀಡಲಾಗುತ್ತದೆ. ಮೊನ್ನೆಯಷ್ಟೇ ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿತ್ತು.

ಅಕ್ಟೋಬರ್ 24 ರ ಜಂಬೂಸವಾರಿ ಮೆರವಣಿಗಾಗಿ ಇಂದಿನಿಂದ ಅಕ್ಟೋಬರ್ 23 ರವರೆಗೆ ಆನೆಗಳಿಗೆ ತಾಲೀಮು ನೀಡಲಾಗುತ್ತದೆ. ಅರಮನೆಯಿಂದ ಬನ್ನಿಮಂಟಪದವರೆಗೆ ರಾಜಮಾರ್ಗದಲ್ಲಿ ಆನೆಗಳು ಸಾಗುತ್ತವೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಎರಡು ಸಮಯ ಸುಮಾರು 5 ಕಿಲೋ ಆನೆಗಳು ಸಾಗುತ್ತವೆ.

750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದು, ಹೀಗಾಗಿ ಮೊದಲ ಮುರ್ನಾಲ್ಕು ದಿನಗಳು ಯಾವುದೇ ತೂಕವಿಲ್ಲದ ಕಾಲ್ನಡಿಗೆ ಮೂಲಕ ತಾಲೀಮು ನಡೆಯುತ್ತದೆ. ನಂತರ ಹಂತಹಂತವಾಗಿ ಮರಳಿನ ಮೂಟೆ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತದೆ.

ರಸ್ತೆಯುದ್ದಕ್ಕೂ ಸಾಲಾಗಿ ಸಾಗುವ ಗಜಪಡೆಯನ್ನು ಮೈಸೂರಿನ ಜನರು ಕಣ್ತುಂಬಿಕೊಳ್ಳುತ್ತಾರೆ.