ಮನೆ ರಾಜ್ಯ ಮೈಸೂರು: ಅಪಘಾತದಲ್ಲಿ ಮೃತರಾಗಿದ್ದವರ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

ಮೈಸೂರು: ಅಪಘಾತದಲ್ಲಿ ಮೃತರಾಗಿದ್ದವರ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

0

ಮೈಸೂರು: ಮೆದುಳು ನಿಷ್ಕ್ರಿಯವಾದ ಪರ್ವೇಜ್(52) ಅವರ ಅಂಗಾಂಗಳನ್ನು ಅವರ ಕುಟುಂಬಸ್ಥರು ದಾನ‌ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈ ವೇಳೆ ಮೃತದೇಹಕ್ಕೆ ಕೈ ಮುಗಿದು, ಸೆಲ್ಯೂಟ್ ಮಾಡುವ ಮೂಲಕ  ಮೈಸೂರಿನ ಅಪೋಲೋ‌ ಆಸ್ಪತ್ರೆ ಸಿಬ್ಬಂದಿಗಳು ಗೌರವ ಸಲ್ಲಿಸಿದ್ದಾರೆ

ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಸಯ್ಯದ ಪರ್ವೇಜ್ ಸೆ. 8 ರಂದು ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿ ಹೋಗುವಾಗ ಮತ್ತೊಂದು ಬೈಕ್​ ನಡುವೆ ಅಪಘಾತವಾಗಿದೆ. ಈ ವೇಳೆ ಪರ್ವೇಜ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು. ನಂತರ ತಕ್ಷಣ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನ ಪರ್ವೇಜ್‌ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ. ಪರ್ವೇಜ್ ಮಿದುಳು ನಿಷ್ಕ್ರಿಯವಾಗಿದ್ದು, ಮತ್ತೆ ಅವರು ಮೊದಲಿನಂತೆ ಆಗಲು ಸಾಧ್ಯವಾಗದ ಸ್ಥಿತಿ ತಲುಪಿದ್ದರು. ಈ ಹಿನ್ನೆಲೆಯಲ್ಲಿ ಪರ್ವೇಜ್ ಕುಟುಂಬದವರು ಪರ್ವೇಜ್ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.

ಅದರಂತೆ ಪರ್ವೇಜ್ ಅವರ ಲಿವರ್, ಕಿಡ್ನಿ, ಹೃದಯದ ಕವಾಟಗಳ ದಾನ ಮಾಡಲಾಗಿದೆ. ಈ ಮೂಲಕ ಪರ್ವೇಜ್ ಅವರ ಅಂಗಾಂಗ ನಾಲ್ಕು ಜನರ ಬಾಳಿಗೆ ಬೆಳಕಾಗಿದೆ.