ಬಿಕ್ಕಳಿಕೆ ನಿವಾರಣೆಗೆ:
• ಒಣಗಿದ ಮಾವಿನ ಎಲೆಗಳನ್ನು ಕೆಂಡದ ಮೇಲೆ ಹಾಕಿದಾಗ ಹೊಗೆ ಹೊರಡುವುದು ಉಸಿರಿನ ಜೊತೆಯಲ್ಲಿ ಈ ಹೊಗೆ ಎಳೆದುಕೊಂಡಲ್ಲಿ ಬಿಕ್ಕಳಿಕೆ ನಿವಾರಣೆಯಾಗುವುದು.
• ಲವಂಗವನ್ನು ಹಲ್ಲುಗಳಿಂದ ಅಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ನಿಲ್ಲುವುದು.
• ಒಂದು ತುಂಡು ಕ್ಯಾರೆಟ್ ತೆಗೆದುಕೊಂಡು ಎದೆ ಹಾಲಿನಲ್ಲಿ ಮಸೀಯಿರಿ ಈ ಹಾಲನ್ನು ಮೂಗಿನ ಹೊಳ್ಳೆಗಳಿಗೆ ಹನಿ ಹನಿಯಾಗಿ ಬಿಡುವುದರಿಂದ ಬಿಕ್ಕಳಿಕೆ ನಿಲ್ಲುವುದು.
• ಪುದಿನಾ ಸೊಪ್ಪಿನ ಚಹಾ ತಯಾರಿಸಿ ವೇಳೆಗೆ ಏಳೆಂಟು ಟೀ ಚಮಚದಂತೆ ಮೂರು ವೇಳೆ ಈ ಚಹಾ ಸೇವಿಸಿ.
ಸುಣ್ಣ ಹೆಚ್ಚಾಗಿ ಬಾಯಿ ಸುಟ್ಟು ಹೋಗಿದ್ದರೆ:
• ನಿಂಬೆಹಣ್ಣಿನ ಅಥವಾ ಕಿತ್ತಳೆ ಹಣ್ಣಿನ ರಸ ಚಿಕುತ್ತಿದ್ದರೆ ಗುಣ ಕಂಡುಬರುವುದು.
• ನೊರೆ ಹಾಲಿನಿಂದ ಎರಡು ಆವರ್ತಿ ಬಾಯಿ ಮುಕ್ಕಳಿಸಿ.
ಗಂಟಲು ಒಡೆದಿರುವಾಗ:
• ಗಂಟಲು ಹೊಡೆದಿರುವಾಗ ಧ್ವನಿ ಕರ್ಕಶವಾಗಿರುವುದು ಮತ್ತು ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುವುದು. ಈ ಸಂದರ್ಭದಲ್ಲಿ ಹಸಿ ಶುಂಠಿಯ ಸಣ್ಣ ಸಣ್ಣ ಚೂರುಗಳನ್ನು ಕಲ್ಲು ಸಕ್ಕರೆ ಸಹಿತ ಜಿಗಿದು ರಸ ಹೀರುತ್ತಿದ್ದರೆ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುವುದು.
• ಒಂದು ಬಟ್ಟಲು ನೀರಿಗೆ ಒಂದು ಟೀ ಚಮಚದಷ್ಟು ಓಂ ಕಾಳು ಹಾಕಿ ಚೆನ್ನಾಗಿ ಕುದಿಸಿ ನಂತರ ಕಷಾಯವನ್ನು ಬಸಿದು ಒಂದೆರಡು ಚಿಟಿಕೆ ಉಪ್ಪು ಹಾಕಿ ಈ ಕಷಾಯವನ್ನು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಆಚೆಗೆ ಉಗುಳಿರಿ. ಚಿಕಿತ್ಸೆಯನ್ನು ಆಗಾಗ ಪುನರಾವರ್ತಿಸಿವುದರಿಂದ ಶೀಘ್ರ ಗುಣ ಕಂಡು ಬಂದು ಆರಾಮವೆನಿಸುವುದು.
ಗಂಟಲು ಹುಣ್ಣು ನಿವಾರಣೆಗೆ:
• ಒಂದು ಬಟ್ಟಲು ಬಿಸಿ ನೀರಿನಲ್ಲಿ ಒಂದು ಟೀ ಚಮಚ ಅಡುಗೆ ಉಪ್ಪು ಕರಗಿಸಿ ಈ ದ್ರಾವಣವನ್ನು ಗಂಟಲಿಗೆ ಸುರಿದುಕೊಂಡು ಕಣಗಳ ಸತ್ತು ಮಾಡಿ ಬಾಯಿ ಮುಕ್ಕಳಿಸಿ ಉಗುಳಿರಿ.
• ಅಡಿಗೆ ಕಷಾಯದಿಂದ ಬಾಯಿ ಮುಕ್ಕಳಿಸಿ.
• ಬೇವಿನ ಸೊಪ್ಪಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಬಿಸಿ ಮಾಡಿ ಮತ್ತು ಬಿಸಿಯ ಹದವರಿತು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ. ಈ ಚಿಕಿತ್ಸೆಯಿಂದ ಗಂಟಲು ಹುಣ್ಣು ಆರುವುದು ಮತ್ತು ನೋವು ಶಮನವಾಗುವುದು.
ಹಲ್ಲಿನ ಸವಕಳಿ ತಡೆಗಟ್ಟಲು:
• ಗರಿಕೆ ಹುಲ್ಲನ್ನು ತಾಂಬೂಲ ಜಗಿಯುವಂತೆ ಜಗಿದು ರಸ ಉಗುಳುತ್ತಿದ್ದರೆ ಬಾಯಿಯ ದುರ್ಗಂಧ ನಿವಾರಣೆಯಾಗುವುದು. ವಸಡಿನಿಂದ ಆಗುವ ರಕ್ತಸ್ರಾವ ನಿಲ್ಲುವುದು ಹಲ್ಲಿನ ಸಹಕಳಿ ನಿವಾರಣೆಯಾಗುವುದು.
• ಹಾಗಾಗಿ ಜೀರಿಗೆ ಏನಾಗಲಿ ಹಸಿ ಈರುಳ್ಳಿ ಏನಾಗಲಿ ಅಗಿಯುತ್ತಿದ್ದರೆ ಹಲ್ಲಿನ ಸವೆತಕ್ಕೆ ತಡೆಯುಂಟಾಗುವುದು.
• ಊಟದ ನಂತರ ಸ್ವಲ್ಪ ಓಮು ಕಾಳು ಬಾಯಿಗೆ ಹಾಕಿಕೊಂಡು ಅಗೆಯುವ ಅಭ್ಯಾಸವಿಟ್ಟುಕೊಂಡರೆ ಹಲ್ಲಿನ ಸವಕಳಿ ತಡೆಯು ಉಂಟಾಗುವುದು.
• ಪ್ರತಿ ದಿನವೂ ಹಸಿ ಬೇವಿನ ಕಡ್ಡಿಯಿಂದ ಹಲ್ಲು ತಿಕ್ಕಿರಿ. ಈ ಕ್ರಮ ಅನುಸರಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆ ಆಗುವುದು. ವಸಡಿನ ಹುಣ್ಣು ಗುಣವಾಗುವುದು. ನಾಲಿಗೆಯ ರುಚಿ ಗ್ರಹಣ ಶಕ್ತಿ ಹೆಚ್ಚುವುದು. ಹಲ್ಲಿನ ಸವಕಳಿಗೆ ತಡೆಯು ಉಂಟಾಗುವುದು. ಹಲ್ಲು ನೋವು ನಿವಾರಣೆಯಾಗುವುದು ಮತ್ತು ಅಲುಗಾಡುವ ಹಲ್ಲುಗಳು ಸುಭದ್ರವಾಗುವುವು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.