ಮನೆ ರಾಜ್ಯ ಬಾಲಕರ ವಸತಿ ನಿಲಯಕ್ಕೆ ಎಸಿ, ತಹಶೀಲ್ದಾರ್ ದಿಢೀರ್ ಭೇಟಿ: ಪರಿಶೀಲನೆ

ಬಾಲಕರ ವಸತಿ ನಿಲಯಕ್ಕೆ ಎಸಿ, ತಹಶೀಲ್ದಾರ್ ದಿಢೀರ್ ಭೇಟಿ: ಪರಿಶೀಲನೆ

0

ತುಮಕೂರು: ಗುಬ್ಬಿ ಪಟ್ಟಣದ ಮೆಟ್ರಿಕ್ ನಂತರದ‌ ಬಾಲಕರ ವಸತಿ ನಿಲಯಕ್ಕೆ ಎಸಿ ಹಾಗೂ ತಹಶೀಲ್ದಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.

Join Our Whatsapp Group

ತುಮಕೂರು ಎಸಿ ಗೌರವ್ ಕುಮಾರ್ ಶೆಟ್ಟಿ, ಗುಬ್ಬಿ ತಹಶೀಲ್ದಾರ್ ಆರತಿ.ಬಿ ಶುಕ್ರವಾರ ರಾತ್ರಿ ಹಾಸ್ಟೆಲ್ ಗೆ ಭೇಟಿ ನೀಡಿದ್ದು, ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ.

ಹಾಸ್ಟೆಲ್ ನ ಅಡುಗೆ ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳ ಕೊಠಡಿ ವೀಕ್ಷಿಸಿದ ಅಧಿಕಾರಿಗಳು, ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ನಡೆಸಿದರು.

ವಾರ್ಡನ್ ಸಂಜೆಯ ವೇಳೆ ಇಲ್ಲದೇ ಇರುವ ಬಗ್ಗೆ  ಸಿಬ್ಬಂದಿಗಳನ್ನು ಪ್ರಶ್ನಿಸಿದ ಉಪ ವಿಭಾಗಾಧಿಕಾರಿ, ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.