ಮನೆ ರಾಜ್ಯ ನಾಪತ್ತೆಯಾಗಿದ್ದ ಯುವಕನ ಶವ ಕೆರೆಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಯುವಕನ ಶವ ಕೆರೆಯಲ್ಲಿ ಪತ್ತೆ

0

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ತಿಪ್ಪಲಾಪುರದಲ್ಲಿ ಯುವಕನೊರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಶವ ಕೆರೆಯಲ್ಲಿ ಪತ್ತೆಯಾಗಿದೆ.

ಗ್ರಾಮದ ಲೇ.ಕೆಂಚೇಗೌಡ ಜಯಂತಿಯವರ ಏಕೈಕ ಪುತ್ರ ಮಧು(28) ಮೃತ ಯುವಕ.

ಈತ ಕೆಳೆದ ಅ.23ರ ಸೋಮವಾರ ರಾತ್ರಿಯಿಂದ ಕಾಣೆಯಾಗಿದ್ದ, ಎಲ್ಲೆಡೆ ಹುಡುಕಾಟ ನಡೆಸಿ ಸಿಗದಿದ್ದಾಗ ಹುಣಸೂರು ಗ್ರಾಮಾಂತರ ಠಾಣೆಗೆ ಪುತ್ರ ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು.

ಬುಧವಾರದಂದು ಸಮೀಪದ ನಾಗನಹಳ್ಳಿ ಕೆರೆಯಲ್ಲಿ ಪುರುಷನ ಶವವೊಂದು ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಹೊರತೆಗೆದು ಪರಿಶೀಲಿಸಲಾಗಿ ಕಾಣೆಯಾಗಿದ್ದ ಮಧು ಎಂಬುದು ತಿಳಿದು ಬಂದ ಮೇರೆಗೆ ಕಾಣೆಯಾದ ರಾತ್ರಿ ಗ್ರಾಮದ ನಾಲ್ವರು ಆತನ ಜೊತೆಗಿದ್ದರು. ರಾತ್ರಿ 9ರ ನಂತರ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಮಗನೊಂದಿಗಿದ್ದವರ ಮೇಲೆ ಅನುಮಾನವಿದ್ದು, ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಕರಣವನ್ನು ಇನ್ಸ್ಪೆಕ್ಟರ್ ಸಿ.ವಿ.ರವಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.