ಮನೆ ರಾಜಕೀಯ ಬಿಜೆಪಿ ಸೇರಲು ಸುಮಲತಾಗೆ  ಆಹ್ವಾನ

ಬಿಜೆಪಿ ಸೇರಲು ಸುಮಲತಾಗೆ  ಆಹ್ವಾನ

0

ರಾಮನಗರ( Raamnagara): ಬಿಜೆಪಿ(BJP) ಸೇರುವಂತೆ ಮಂಡ್ಯ ಸಂಸದೆ (MP) ಸುಮಲತಾ ಅಂಬರೀಶ್(Sumalatha Ambareesh) ಅವರಿಗೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಆಹ್ವಾನ ನೀಡಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಸದೆಯನ್ನು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ  ಸಿ.ಪಿ.ಯೋಗೇಶ್ವರ್​, ಸಂಸದೆ ಸುಮಲತಾ ಅಂಬರೀಶ್​ ಅವರನ್ನು  ಮದುವೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅವರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದೇವೆ. ಪಕ್ಷಕ್ಕೆ ಸಪೋರ್ಟ್ ಮಾಡಿ ಎಂದಿದ್ದೇವೆ‌. ಅವರ ಗೆಲುವಿನಲ್ಲಿ ನಮ್ಮ ಪಕ್ಷ ಕೂಡ ಶ್ರಮಿಸಿದೆ. ಇದಲ್ಲದೆ ಪಕ್ಷ ಬಲವರ್ಧನೆಗೆ ಬೆಂಬಲ ನೀಡಿ ಎಂದಿದ್ದೇವೆ‌ ಎಂದರು.
ವರಿಷ್ಠರು ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಹಲವು ಕಾರ್ಯಕ್ರಮಗಳನ್ನ ರೂಪಿಸುತ್ತಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಉತ್ತಮ ಅಭ್ಯರ್ಥಿಗಳನ್ನು ಹಾಕುವ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದರು.
ಸಮಾಜಮುಖಿ ಕೆಲಸ ಮಾಡುವವರಿಗೆ ಪಕ್ಷಕ್ಕೆ ಅಹ್ವಾನ ಮಾಡಲಾಗುತ್ತಿದೆ. ಮಂಡ್ಯದ ಲಕ್ಷಿ ಅಶ್ವಿನ್​ಕುಮಾರ್ ಅವರನ್ನೂ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಸಾಮೂಹಿಕ ಜವಾಬ್ದಾರಿಯಡಿ ಕೆಲಸ ಮಾಡುತ್ತೇನೆ. ನಾನೇನೂ ಆಪರೇಷನ್ ಎಕ್ಸ್​ಪರ್ಟ್ ಅಲ್ಲ‌. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ನಾಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತೇವೆ ಎಂದರು.