ಮನೆ ಸ್ಥಳೀಯ ಜಮೀನು, ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ: ಹಲವರಿಗೆ ಗಾಯ

ಜಮೀನು, ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ: ಹಲವರಿಗೆ ಗಾಯ

0

ಮೈಸೂರು: ಜಮೀನು ಹಾಗೂ ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ನಡೆದಿದೆ.

ಘಟನೆಯಲ್ಲಿ ಗಲಾಟೆಯಲ್ಲಿ ಅಂಬರೀಶ್, ಯಲ್ಲಮ್ಮ ನವೀನ್ ಕುಮಾರ್, ಸುಷ್ಮಾ ಜಗನ್ನಾಥ್, ಜಯಲಕ್ಷ್ಮಿ ಎಂಬುವರು ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹೋದರ ಹಾಗೂ ಸಹೋದರರ ಮಕ್ಕಳ ಮೇಲೆ ಹಲ್ಲೆ ನಡೆದಿದೆ.  ಎಲ್ಲರಿಗೂ ಸಮವಾಗಿ ಪಾಲು ನೀಡಿದ ನಂತರವೂ ತಮಗೆ ಮತ್ತಷ್ಟು ನಿವೇಶನ ಜಮೀನು ಬರಬೇಕು ಎಂದು ಗಲಾಟೆ ನಡೆದಿದೆ.

ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಹಾಗೂ ಪುತ್ರ ಅಭಿಲಾಷ್ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ನಡೆಸಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.