ಮನೆ ಅಪರಾಧ ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ.ಹಣ ಕಳ್ಳತನ.!

ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂ.ಹಣ ಕಳ್ಳತನ.!

0

ಮಂಡ್ಯ: ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿ 4.5 ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ.

Join Our Whatsapp Group

ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ನತದೃಷ್ಟನಾಗಿದ್ದು, ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ SBI ಬ್ಯಾಂಕ್ ಗೆ ಕೆಲಸದ ನಿಮಿತ್ತ ಹೋಗಿದ್ದರು.

ಕಾರಿನಲ್ಲಿ ಹಣವಿಟ್ಟಿದ್ದನ್ನ ಗಮನಿಸಿದ ಖತರ್ನಾಕ್ ಕಳ್ಳರು ಬ್ರೀಜಾ ಕಾರಿನಲ್ಲಿದ್ದ ಹಣವನ್ನ ಎಗರಿಸಿದ್ದಾರೆ. ಜಮೀನು ರಿಜಿಸ್ಟರ್ ಮಾಡಿಸಿ ರಿಜಿಸ್ಟರ್ ಕಚೇರಿ ಬಳಿಯಿಂದ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಬೇರೆಯವರಿಗೆ ನೀಡಬೇಕಿದ್ದ ಹಣ ಕಳೆದುಕೊಂಡ ಪರಮೇಶ್ ಗೋಳಾಡುತ್ತಿದ್ದಾರೆ.

 ಈ ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.