ಮನೆ ರಾಜ್ಯ ಸಂಕ್ರಾಂತಿ ದಿನವೇ ತೋಟಕ್ಕೆ ನುಗ್ಗಿದ ಕಾಡಾನೆಗಳು: ಬೆಳೆ ಹಾನಿ

ಸಂಕ್ರಾಂತಿ ದಿನವೇ ತೋಟಕ್ಕೆ ನುಗ್ಗಿದ ಕಾಡಾನೆಗಳು: ಬೆಳೆ ಹಾನಿ

0

ರಾಮನಗರ: ಸಂಕ್ರಾಂತಿ ದಿನವೇ ಕಾಡಾನೆಗಳು ರೈತನ ತೋಟಕ್ಕೆ ನುಗ್ಗಿ ಬೆಳೆಗೆ ಹಾನಿ ಮಾಡಿದ ಘಟನೆ ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ನಡೆದಿದೆ.

ರೈತ ಪ್ರಸನ್ನಕುಮಾರ್ ಎಂಬುವರಿಗೆ ಸೇರಿದ 1.50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ  ಟೊಮ್ಯಾಟೊ ಬೆಳೆಗೆ ಆನೆಗಳ ಹಿಂಡು ದಾಳಿ ಮಾಡಿದೆ. ತಡರಾತ್ರಿ ದಾಳಿ ಮಾಡಿ ಬೆಳೆ ಸಂಪೂರ್ಣ ನಾಶ ಮಾಡಿದೆ.

ಇದೇ ವೇಳೆ 5 – 6 ತೆಂಗಿನ ಮರಗಳಿಗೆ ಸಹ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ರೈತರು ಮನವಿ ಮಾಡಿದ್ದಾರೆ.