ಮನೆ ಅಪರಾಧ ಸಹೋದರರ ನಡುವೆ ಜಮೀನು ವಿವಾದಕ್ಕೆ ಗಲಾಟೆ: ಟ್ರ್ಯಾಕ್ಟರ್ ಹರಿಸಿ ಸಹೋದರನ ಹತ್ಯೆಗೆ ಯತ್ನ

ಸಹೋದರರ ನಡುವೆ ಜಮೀನು ವಿವಾದಕ್ಕೆ ಗಲಾಟೆ: ಟ್ರ್ಯಾಕ್ಟರ್ ಹರಿಸಿ ಸಹೋದರನ ಹತ್ಯೆಗೆ ಯತ್ನ

0

ಉತ್ತರ ಪ್ರದೇಶ: ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರಾದ ರಾಮ್ ಕುಮಾರ್ ಹಾಗೂ ಓಂಕುಮಾರ್ ನಡುವೆ ನಡೆದ ಜಗಳದಲ್ಲಿ ಆರೋಪಿ ರಾಮ್‌ ಕುಮಾರ್ ತನ್ನ ಸಹೋದರ ಓಂಕುಮಾರ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ್ದಾನೆ.

Join Our Whatsapp Group

ಅಲ್ಲದೆ ಟ್ರ್ಯಾಕ್ಟರ್ ನ ಅಡಿಗೆ ಬಿದ್ದ ಸಹೋದರ ಹೊರ ಬರಲು ಯತ್ನ ನಡೆಸುವ ವೇಳೆ ಆರೋಪಿ ರಾಮಕುಮಾರ್ ಮೂರೂ ನಾಲ್ಕು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದೆ ಮುಂದೆ ಚಲಾಯಿಸಿದ್ದಾನೆ ಅದೃಷ್ಟವಶಾತ್ ಸಹೋದರ ಓಂಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈ ವೇಳೆ ರಕ್ಷಣೆಗೆ ಬಂದ ಓಂಕುಮಾರ್ ಪತ್ನಿ ಪವಿತ್ರ ಅವರಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ.

ಘಟನೆಯ ಭಯಾನಕ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಘಟನೆ ಸಂಬಂಧ ಓಂಕುಮಾರ್ ತನ್ನ ಸಹೋದರನ ಮೇಲೆ ದೂರು ದಾಖಲಿಸಿದ್ದು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.