ಮನೆ ಅಪರಾಧ ಸಹೋದರರ ನಡುವೆ ಜಮೀನು ವಿವಾದಕ್ಕೆ ಗಲಾಟೆ: ಟ್ರ್ಯಾಕ್ಟರ್ ಹರಿಸಿ ಸಹೋದರನ ಹತ್ಯೆಗೆ ಯತ್ನ

ಸಹೋದರರ ನಡುವೆ ಜಮೀನು ವಿವಾದಕ್ಕೆ ಗಲಾಟೆ: ಟ್ರ್ಯಾಕ್ಟರ್ ಹರಿಸಿ ಸಹೋದರನ ಹತ್ಯೆಗೆ ಯತ್ನ

0

ಉತ್ತರ ಪ್ರದೇಶ: ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರಾದ ರಾಮ್ ಕುಮಾರ್ ಹಾಗೂ ಓಂಕುಮಾರ್ ನಡುವೆ ನಡೆದ ಜಗಳದಲ್ಲಿ ಆರೋಪಿ ರಾಮ್‌ ಕುಮಾರ್ ತನ್ನ ಸಹೋದರ ಓಂಕುಮಾರ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ್ದಾನೆ.

Join Our Whatsapp Group

ಅಲ್ಲದೆ ಟ್ರ್ಯಾಕ್ಟರ್ ನ ಅಡಿಗೆ ಬಿದ್ದ ಸಹೋದರ ಹೊರ ಬರಲು ಯತ್ನ ನಡೆಸುವ ವೇಳೆ ಆರೋಪಿ ರಾಮಕುಮಾರ್ ಮೂರೂ ನಾಲ್ಕು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದೆ ಮುಂದೆ ಚಲಾಯಿಸಿದ್ದಾನೆ ಅದೃಷ್ಟವಶಾತ್ ಸಹೋದರ ಓಂಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈ ವೇಳೆ ರಕ್ಷಣೆಗೆ ಬಂದ ಓಂಕುಮಾರ್ ಪತ್ನಿ ಪವಿತ್ರ ಅವರಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ.

ಘಟನೆಯ ಭಯಾನಕ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಘಟನೆ ಸಂಬಂಧ ಓಂಕುಮಾರ್ ತನ್ನ ಸಹೋದರನ ಮೇಲೆ ದೂರು ದಾಖಲಿಸಿದ್ದು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಹಿಂದಿನ ಲೇಖನಅಣ್ಣ ತಮ್ಮಂದಿರಂತೆ ಬದುಕುವವರ ಮಧ್ಯೆ ಹಿಂದುತ್ವದ ವಿಷ ಬೀಜ ಬಿತ್ತುವುದೇ ಬಿಜೆಪಿ ಸಾಧನೆ: ಸುನೀಲ್ ಬೋಸ್
ಮುಂದಿನ ಲೇಖನವೈದ್ಯಕೀಯ ವಿಜ್ಞಾನ ಸಂಸ್ಥೆ ಅಧೀಕ್ಷಕರನ್ನು ಅದೇ ಸಂಸ್ಥೆಯ ಮತ್ತೊಂದು ವಿಭಾಗದ ಮುಖ್ಯಸ್ಥರಾಗಿ ನೇಮಿಸಲಾಗದು: ಹೈಕೋರ್ಟ್