ಮನೆ ಸ್ಥಳೀಯ ಏ.13 ರಂದು ಮೈಸೂರಿಗೆ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆಗಮನ

ಏ.13 ರಂದು ಮೈಸೂರಿಗೆ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆಗಮನ

0

ಮೈಸೂರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಗಣ್ಯರ್ ಮಿಲನ್ ಕಾರ್ಯಕ್ರಮವನ್ನು  ಏಪ್ರಿಲ್ 13 ರಂದು ಸಂಜೆ 7 ಗಂಟೆಗೆ ಮೆಟ್ರೊಪೋಲ್ ವೃತ್ತ ಗುರು ರೆಸಿಡೆನ್ಸಿ ಬಳಿ ಇರುವ ಗೋವಿಂದ ಹಾಲ್ ಆವರಣದ ಮುಕುಂದ್ ಸದನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಸದರಿ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಆಗಮಿಸುತ್ತಿದ್ದಾರೆ.

Join Our Whatsapp Group

ಅವರ ಭೇಟಿಯ ಸಂದರ್ಭದಲ್ಲಿ, ಪ್ರಸ್ತುತ ಪ್ರವೃತ್ತಿಗಳು, ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು, ನಮ್ಮ ಸಿದ್ಧತೆ ಮತ್ತು ಕ್ರಿಯಾ ಯೋಜನೆ, ವಿಶೇಷವಾಗಿ ಬೆಂಗಳೂರಿನ ಶಂಕರಪುರಂನಲ್ಲಿ ನಡೆಯುತ್ತಿರುವ ವಿಎಚ್‌ಪಿ ರಾಜ್ಯ ಪ್ರಧಾನ ಕಚೇರಿ ಧರ್ಮಶ್ರೀ ಕಟ್ಟಡದ ಕುರಿತು ಚರ್ಚಿಸಲು ಅವರು ಸಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಹಿನ್ನಲೆ ಆಸಕ್ತರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.