ಮನೆ ಸುದ್ದಿ ಜಾಲ ಜಿಟಿಡಿ ಮೊಮ್ಮಗಳ ಸಾವಿಗೆ ಸಂತಾಪ ಸೂಚಿಸಿದ ಎಸ್.ಟಿ.ಸೋಮಶೇಖರ್‌, ಅಂತ್ಯಸಂಸ್ಕಾರದಲ್ಲಿ ನಿಖಿಲ್‌ ಕುಮಾರಸ್ವಾಮಿ ಭಾಗಿ

ಜಿಟಿಡಿ ಮೊಮ್ಮಗಳ ಸಾವಿಗೆ ಸಂತಾಪ ಸೂಚಿಸಿದ ಎಸ್.ಟಿ.ಸೋಮಶೇಖರ್‌, ಅಂತ್ಯಸಂಸ್ಕಾರದಲ್ಲಿ ನಿಖಿಲ್‌ ಕುಮಾರಸ್ವಾಮಿ ಭಾಗಿ

0

ಮೈಸೂರು (Mysuru)-ಶಾಸಕರಾದ ಜಿ.ಟಿ. ದೇವೇಗೌಡರ ಮೊಮ್ಮಗಳು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಅವರ ಪುತ್ರಿ ಗೌರಿಯ ಅಂತಿಮ ಸಂಸ್ಕಾರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾಗಿಯಾದರು.

ಅಂತಿನ ಸಂಸ್ಕಾರದಲ್ಲಿ ಭಾಗಿಯಾಗಿ ಜಿಟಿಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಶನಿವಾರ ತಡರಾತ್ರಿ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗೌರಿ ನಿಧನರಾಗಿದ್ದರು. ಇಂದು ಮೈಸೂರಿನ ಗುಂಗ್ರಾಲ್ ಛತ್ರ ತೋಟದ ಮನೆಯಲ್ಲಿ ನಡೆದ ಗೌರಿಯ ಅಂತಿಮ ಸಂಸ್ಕಾರ ನೆರವೇರಿತು.

ಸಚಿವರಾದ ಎಸ್.ಟಿ.ಸೋಮಶೇಖರ್‌ ಅವರು ಗೌರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಆತ್ಮೀಯರೂ ಆದ ಜಿ. ಟಿ.ದೇವೇಗೌಡ ಅವರ  ಮೊಮ್ಮಗಳು ಹಾಗೂ ಜಿ.ಡಿ. ಹರೀಶ್ ಗೌಡ ಅವರ ಪುತ್ರಿ ಗೌರಿ ಅನಾರೋಗ್ಯದಿಂದ ಅಕಾಲಿಕ ನಿಧನರಾಗಿರುವ ಸುದ್ದಿ ತಿಳಿದು ಮನಸಿಗೆ ತೀವ್ರ ನೋಂವುಟು ಮಾಡಿದೆ.

ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಜಿ.ಟಿ.ದೇವೇಗೌಡ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಕಂದಮ್ಮನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.