ಮನೆ ಸುದ್ದಿ ಜಾಲ ಕೆಎಸ್‌ಆರ್‌ಟಿಸಿ: ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರ

ಕೆಎಸ್‌ಆರ್‌ಟಿಸಿ: ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರ

0

ಬೆಂಗಳೂರು(Bengaluru): ಅಪಘಾತ ನಿಯಂತ್ರಿಸುವ ಸಂಬಂಧ ಸಮಾಲೋಚನೆ ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ನಿಗಮದ ವ್ಯವವ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಚಾಲನಾ ಸಿಬ್ಬಂದಿಗಳ ಜತೆ ಸಂವಾದ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು, ನಾಲ್ಕು ತಿಂಗಳ ಅವಧಿಯಲ್ಲಿ ಕೆಎಸ್‌ಆರ್‌ಟಿಸಿಯ 80 ಬಸ್‌ ಅಪಘಾತಗಳಲ್ಲಿ ಹೆಚ್ಚಿನವು 40ರಿಂದ 50 ವರ್ಷ ವಯಸ್ಸಿನ ಚಾಲಕ ರಿಂದ ಸಂಭವಿಸಿದ್ದು, ನೌಕರರು ಎಚ್ಚರಿಕೆ ಯಿಂದ ಚಾಲನೆ ಮಾಡಬೇಕು ಎಂದು ತಿಳಿಸಿದರು.

ಜನವರಿಯಿಂದ ಏಪ್ರಿಲ್ ನಡುವೆ 80 ಮಾರಣಾಂತಿಕ ಅಪಘಾತ ಗಳು ವರದಿಯಾಗಿವೆ. ಶೇ 39ರಷ್ಟು ಅಪಘಾತಗಳು 40 ರಿಂದ 50 ವರ್ಷ ವಯಸ್ಸಿನ ಚಾಲಕರಿಂದಲೇ ಉಂಟಾಗಿವೆ‌. ಶೇ 23ರಷ್ಟು ಅಪಘಾತಗಳು 36 ರಿಂದ 40 ವರ್ಷ ವಯಸ್ಸಿನ ಚಾಲಕರಿಂದ ಉಂಟಾಗಿವೆ. ಸಾವು-ನೋವುಗಳ ಪ್ರಮಾಣ ವನ್ನು ಅವಲೋಕಿಸಿದಾಗ ಶೇ44 ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು ಶೇ19 ಅಪಘಾತಗಳು ಪಾದಚಾರಿ ಗಳು, ಶೇ27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ ಸಂಭವಿಸಿವೆ ಎಂದು ಕೆಎಸ್‌ಆರ್‌ಟಿಸಿ ಅವಲೋಕಿಸಿದೆ