ಮನೆ ಮನರಂಜನೆ ಹೊಸಬರ ಚಿತ್ರ ‘ಸಿಂಹಾಸನ’

ಹೊಸಬರ ಚಿತ್ರ ‘ಸಿಂಹಾಸನ’

0

“ಸಿಂಹಾಸನ’- ಹೀಗೊಂದು ಚಿತ್ರ ಇತ್ತೀಚೆಗೆ ಆರಂಭವಾಗಿದೆ. ಚಾಮರಾಜ ನಗರ ಮೂಲದ ಚಂದ್ರು ನಾಲ್ರೋಡ್‌ ಅವರು ಮುನೇಶ್ವರ ಪ್ರೊಡಕ್ಷನ್‌ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಡಿ.ಆರ್‌.ದಯಾನಂದಸ್ವಾಮಿ “ಸಿಂಹಾಸನ’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

Join Our Whatsapp Group

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶರು, “ಇದೊಂದು ಪೊಲಿಟಿಕಲ್‌ ಡ್ರಾಮಾ. ಪ್ರಸಕ ಯುವಜನಾಂಗವು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಾದವನು ರಾಜಕೀಯ ಪ್ರವೇಶ ಮಾಡಿದರೆ ಯಾವ ರೀತಿ ಕಷ್ಟದಲ್ಲಿ ಸಿಲುಕುತ್ತಾನೆ ಮತ್ತು ಅದೆಲ್ಲವನ್ನು ಎದುರಿಸಿ ಹೇಗೆ ಸಾಧನೆ ಮಾಡುತ್ತಾನೆ ಎಂಬುದು ಈ ಚಿತ್ರದ ಸಾರಾಂಶ’ ಎಂದರು.

ಚನ್ನಪಟ್ಟಣ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿದೆ ತಂಡ. “ನನಗೆ ಇದು ಪ್ರಥಮ ನಿರ್ಮಾಣದ ಸಿನಿಮಾ. ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರಿಂದ, ಇದರಲ್ಲಿ ಕೂಲಿ ಹುಡುಗನಾಗಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆ’ ಎನ್ನುವುದು ನಾಯಕ ಚಂದ್ರು ನಾಲ್ರೋಡ್‌ ಅವರ ಮಾತು. ರೇಷ್ಮಾ ಚಿತ್ರದ ನಾಯಕಿ.