ಮನೆ ರಾಜ್ಯ ವಿಜಯಪುರ: ಸರ್ಕಾರಿ ಸ್ಥಳ, ರಸ್ತೆ ಅತಿಕ್ರಮಣ ಒತ್ತುವರಿ ತೆರವು

ವಿಜಯಪುರ: ಸರ್ಕಾರಿ ಸ್ಥಳ, ರಸ್ತೆ ಅತಿಕ್ರಮಣ ಒತ್ತುವರಿ ತೆರವು

0

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ನಗರದ ಮಹಾತ್ಮಾ ಗಾಂಧೀಜಿ ವೃತ್ತದಿಂದ ಸರಾಫ ಬಜಾರ ಮಾರ್ಗದಲ್ಲಿ ಸರ್ಕಾರಿ ಸ್ಥಳ ಒತ್ತುವರಿ ತೆರವು ಹಾಗೂ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದೆ.

Join Our Whatsapp Group

ಜಿಲ್ಲಾಧಿಕಾರಿ ಭೂಬಾಲನ್, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸಾರಥ್ಯದಲ್ಲಿ ಒತ್ತುವರಿ ತೆರವಿಗಾಗಿ ಜೆಸಿಬಿ ಬಳಸಿದ್ದು, ಒತ್ತುವರಿ ಮಾಡಿ ನಿರ್ಮಿಸಿದ್ದಾರೆ ಎನ್ನಲಾದ ದೊಡ್ಡ ದೊಡ್ಡ ಕಟ್ಟಡಗಳು ನೆಲಸಮವಾಗಿವೆ.

ಕಾರ್ಯಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

ಒತ್ತುವರಿ ತೆರವು ಮಾಡುವ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಕಾಲಾವಕಾಶ ಕೋರಿ, ಕಟ್ಟಡ ಒಡೆಯದಂತೆ ಮನವಿ ಮಾಡುತ್ತಿದ್ದುದು ಕಂಡುಬಂತು. ಆದರೆ ಅಧಿಕಾರಿಗಳು ಮಾತ್ರ ಮಹಾನಗರ ಪಾಲಿಕೆಯಿಂದ ಅದಾಗಲೇ ನೋಟೀಸ್ ನೀಡಿ, ಕಾಲಾವಕಾಶವನ್ನೂ ನೀಡಿದ್ದೇವೆ. ಇನ್ನು ಯಾವುದೇ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಕಾರ್ಯಾಚರಣೆ ಮುಂದುವರೆಸಿದರು.