ಮನೆ ರಾಜ್ಯ ರಾಮನಗರ: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

ರಾಮನಗರ: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

0

ರಾಮನಗರ: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ನಡೆಸಿದೆ.

Join Our Whatsapp Group

ರಾಮನಗರ ಹೊರವಲಯದ ಕಣ್ವ ಹೊಳೆ ಬಳಿ ಘಟನೆ ನಡೆದಿದ್ದು, ಇರುಳಿಗರ ದೊಡ್ಡಿ ನಿವಾಸಿ ಮರಿಲಿಂಗ (50) ಎಂಬವರಿಗೆ ಮಾರಣಾಂತಿಕ ಗಾಯವಾಗಿದೆ.

ಗುರುವಾರ ಕೂಲಿ ಕೆಲಸಕ್ಕೆ ತೆರಳಿದ್ದ ಮರಿಲಿಂಗ ಅವರು ಮಳೆ ಬಂದ ಕಾರಣ ಬೆಟ್ಟದ ಗವಿ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ಗವಿಯೊಳಗಿನಿಂದ ಬಂದ ಕರಡಿ ಗುಂಪು ಮರಿಲಿಂಗನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಮರಲಿಂಗ ಅವರ ಮೈಯೆಲ್ಲಾ ಗಾಯವಾಗಿದೆ. ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕರಡಿಗಳ ಆಕ್ರಮಣ ಹೆಚ್ಚುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.