ರೋಗನಿರ್ಧಾರ
ಕಿಡ್ನಿ ಸಮಸ್ಯೆ ಇದೆ ಅನಿಸಿದಾಗ ಡಾಕ್ಟರ್ ಮೊದಲು ಈ ಕೆಳಗಿನ ಸರಳ ಪರೀಕ್ಷೆಗಳನ್ನು ಮಾಡುತ್ತಾರೆ:
★ಸಾಮಾನ್ಯವಾಗಿ ಮಾಡುವ (ಮೂತ್ರ ಪರೀಕ್ಷೆ, ಮೂತ್ರದಲ್ಲಿ ಆಲ್ಬುಮಿನ್ ಪ್ರಮಾಣ ಹೆಚ್ಚಾಗಿದ್ದರೆ, ಕಿಡ್ನಿಯ ಫಿಲ್ಟರ್ ಗಳಲ್ಲಿ ಏನೋ ಲೋಪವಿದೆಯೆಂದು ಅರ್ಥ )
★ರಕ್ತದಲ್ಲಿ ಯೂರಿಯಾ Creatinine ತರಹದ ಮಲಿನ ವಸ್ತುಗಳ ಪ್ರಮಾಣವನ್ನು ತಿಳಿಯಲು ರಕ್ತ ಪರೀಕ್ಷೆ (ಇವು ಹೆಚ್ಚಾಗಿದ್ದರೆ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸೂಚನೆ.)
★ಅಲ್ಟ್ರಾ ಸೋನೋಗ್ರಫಿ (ಈ ಪರೀಕ್ಷೆಯ ಮೂಲಕ ಕಿಡ್ನಿ ಕಲ್ಲುಗಳು ಅಡ್ಡಿಯಾಗುತ್ತಿವೆಯೇನೋ, ಅಲ್ಲದೆ ಕಿಡ್ನಿಗಳು ಬಹಳ ಸಣ್ಣದಾಗಿದ್ದರೆ ಗುಣವಾಗದ ಕಿಡ್ನಿ ವ್ಯಾದಿಯಿದೆಯೆಂದು ಅರ್ಥವಾಗುತ್ತದೆ.)
ಈ ಮೇಲೆ ಹೇಳಿದ ಟೆಸ್ಟುಗಳ ನಂತರ ಡಾಕ್ಟರ್ ಇನ್ನೂ ಅಗತ್ಯವೆಂದು ಭಾವಿಸಿದರೆ, Intravenous Pyelography ಇಲ್ಲವೇ ಕಿಡ್ನಿ ಬಾಯಪ್ಸಿ ರೀತಿಯ ಮತ್ತಿತರ ಪರೀಕ್ಷೆಗಳನ್ನೂ ಮಾಡುತ್ತಾರೆ.
ಚಿಕಿತ್ಸೆ
★ಅಕ್ಯೂಟ್ ಕಿಡ್ನಿ ಫೇಲ್ಯೂರ್ ನಲ್ಲಿ ತೀವ್ರ ರಕ್ತಸ್ರಾವ ಮೊದಲಾದ ಮೂಲಕಾರಣಗಳಿಗೆ ತುರ್ತು ಚಿಕಿತ್ಸೆ ಮಾಡಲಾಗುತ್ತದೆ. ರಕ್ತ ಪೂರೈಕೆ 🥰(Blood Transfusion)ಇಲ್ಲವೇ Saline Intravenous Infusion ಮೂಲ ರಕ್ತ ಪ್ರಮಾಣವನ್ನು ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲಾಗುತ್ತದೆ.
★ಕಿಡ್ನಿ ಕಲ್ಲುಗಳು, ಟ್ಯೂಮರ್ ಗಳು, ಇಲ್ಲವೇ ಪ್ಲಾಸ್ಟೇಟ್ ಗ್ರಂಥಿ ಹೀಗ್ಗುವಿಕೆಯಂತಹ ಪರಿಸ್ಥಿತಿಗಳಲ್ಲಿ ಶಾಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.
★ ಶರೀರದಲ್ಲಿನ ಹೆಚ್ಚುವರಿ Fluids ಕಡಿಮೆ ಮಾಡಿ,ಮೂತ್ರ ವಿಸರ್ಜನೆಯನ್ನು ಉತ್ತಮಗೊಳಿಸಲು Diuretic ಡ್ರಗ್ಸನ್ನು ಕೊಡಲಾಗುತ್ತದೆ.
★ಆಕ್ಯೂಟ್ ಕಿಡ್ನಿ ಫೇಲ್ಯೂರ್ ಗೆ ಸಂಬಂಧಿಸಿದ ಬಹಳ ಪ್ರಕರಣಗಳಲ್ಲಿ, ಕಿಡ್ನಿಗಳು ಮತ್ತೆ ಸಾಧಾರಣ ಸ್ಥಿತಿಗೆ ಬರುವವರೆಗೆ, ರಕ್ತದಲ್ಲಿನ ಮಲಿನ ವಸ್ತುಗಳನ್ನು ಕೃತಕವಾಗಿ ಹೊರಹಾಕಲು ತಾತ್ಕಾಲಿಕ ಡಯಾಲಿಸಿಸ್ ಮಾಡುತ್ತಾರೆ.
★ಎಲ್ಲ ಬಗೆಯ ಕಿಡ್ನಿ ಫೇಲ್ಯೂರ್ ಚಿಕಿತ್ಸೆಗಳಲ್ಲಿಯೂ,ಆಹಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
★ ಕಿಡ್ನಿಗಳ ಮೇಲಿನ ಒತ್ತಡವನ್ನು ತಗ್ಗಿಸಲು ಪ್ರೋಟೀನ್ ಗಳು ಕಡಿಮೆಯಾಗಿಯೂ, ಕಾರ್ಬೋಹೈಡ್ರೇಟ್ ಗಳು ಹೆಚ್ಚಾಗಿಯೂ, ಇರುವಂತಹ ಆಹಾರವನ್ನು ತೆಗೆದುಕೊಳ್ಳಬೇಕು.
★ ಉಪ್ಪಿನ ಬಳಕೆ ಬಹಳ ಕಡಿಮೆ ಮಾಡಬೇಕು.
★ಮೂತ್ರ ವಿಸರ್ಜನೆ ಪ್ರಮಾಣವಾಗಿ ನೀರನ್ನು ಕುಡಿಯಬೇಕು
★ ಕಿಡ್ನಿಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಎಚ್ಚರ ವಹಿಸಬೇಕು.
★ಬಿ.ಪಿ. ಪ್ರಾರಂಭವಾದರೆ,ಅದನ್ನು ನಿಯಂತ್ರಣದಲ್ಲಿರುವ ಔಷಧಗಳನ್ನು ಉಪಯೋಗಿಸಬೇಕು.
★ಕಿಡ್ನಿಗಳು ಪೂರ್ತಿ ಹಾನಿಯಾಗುವುದನ್ನು ಎನ್ನುತ್ತಾರೆ ಇದಕ್ಕೆ ಜೀವನ ಪರ್ಯಂತ ಡಯಾಲಿಸಿಸ್ ಮಾಡಿಸುವುದು.ಇಲ್ಲವೇ ಬದಲಿ ಕಿಡ್ನಿ ಜೋಡಣೆ ವ್ಯವಸ್ಥೆ ಮಾಡಿಸುವುದೊಂದೇ ಮಾರ್ಗ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ಲಕ್ಷ ಮಂದಿ ಇಂತಹ ಕಿಡ್ನಿ ರೋಗಗಳಿಂದ ನರಳುತ್ತಿದ್ದಾರೆಂದು ಅಂದಾಜು.
ಕಿಡ್ನಿರೋಗಿಗಳು ಆಂಟಾಸಿಡ್ಸ್ ಆಮ್ಲರೋಧಕಗಳು
★ಗ್ಯಾಸ್ಟ್ರಬಲ್ ಇರುವವರಿಗೆ ಹೆಚ್ಚಾಗಿ ಬಳಕೆಯಾಗುವ ಆಂಟಾಸಿಡ್ ಗಳಲ್ಲಿ ಅಲ್ಯೂಮಿನಿಯಮ್ ಮ್ಯಾಗ್ಸೀಷಿಯಮ್ ಮಿಶ್ರಣಗಳಿರುತ್ತವೆ.
★ ಮ್ಯಾಗ್ನಿಷಿಯಮ್ ಲವಣಗಳು ಕಿಡ್ನಿಗಳಿಗೆ ಅಹಿತ ಮಾಡುತ್ತಾ ಮತ್ತಷ್ಟು ಹಾನಿಯುಂಟು ಮಾಡುತ್ತವೆ.
★ಕಿಡ್ನಿ ರೋಗಿಗಳಿಂದ ತೊಂದರೆಪಡುವ ರೋಗಿಗಳು ಮ್ಯಾಗ್ನಿಷಿಯಂ ಇರುವಂತಹ ಆಂಟಾಸಿಡ್ ಗಳನ್ನು ಬಳಸಕೂಡದು.
★ಅದಕ್ಕೆ ಬದಲಾಗಿ ಅವರು ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್ ಇರುವ ಆಂಟಾಸಿಡ್ ಗಳನ್ನು ಬಳಸಬಹುದು. ಇವುಗಳಲ್ಲಿ ಮ್ಯಾಗ್ನೀಷಿಯಮ್ ಇಲ್ಲದಿರುವುದರಿಂದ ಹೆಚ್ಚು ಸುರಕ್ಷಿತ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.