ಮನೆ ಅಪರಾಧ ಅತ್ತೆ ಮಗಳು ಆತ್ಮಹತ್ಯೆ: ಮನನೊಂದ ಪ್ರಿಯಕರನೂ ಸಾವಿಗೆ ಶರಣು

ಅತ್ತೆ ಮಗಳು ಆತ್ಮಹತ್ಯೆ: ಮನನೊಂದ ಪ್ರಿಯಕರನೂ ಸಾವಿಗೆ ಶರಣು

0

ಮೈಸೂರು: ಅತ್ತೆಯ ಮಗಳ ಆತ್ಮಹತ್ಯೆಯಿಂದ ಮನನೊಂದ ಯುವಕ‌ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಮೈಸೂರಿನಲ್ಲಿ ಸಾವಿನಲ್ಲೂ ಪ್ರೇಮಿಗಳು ಒಂದಾಗಿದ್ದಾರೆ.

Join Our Whatsapp Group

ಮೃತರನ್ನು ಮೋನಿಕಾ (20) ಮತ್ತು ಮನು (22) ಎಂದು ಗುರುತಿಸಲಾಗಿದೆ.

ಮೈಸೂರಿನ ಮಂಡಕಳ್ಳಿಯ ನಿವಾಸಿ ನಾಗರಾಜು ಮತ್ತು ಮಂಜುಳಾ ದಂಪತಿ ಪುತ್ರಿ ಮೋನಿಕಾ ಅವರನ್ನು ಮನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಪ್ರೀತಿಗೆ ಎರಡು ಕುಟುಂಬದವರು ಒಪ್ಪಿದಲ್ಲದೇ ಮದುವೆ ಮಾಡಲು ಸಹ ಸಿದ್ಧರಾಗಿದ್ದರು. ಮನು ಅವರು ಮುರುಗೇಶ್ ಅವರ ಪುತ್ರ. ಇವರು ಜ್ಯೋತಿ ನಗರದ ಎಂಸಿಸಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಮೋನಿಕಾ ಕೂಡ ದಟ್ಟಗಳ್ಳಿಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ನೆಲೆಸಿದ್ದರು.

ಬುಧವಾರ ರಾತ್ರಿ ಮೋನಿಕಾ ಮತ್ತು ಮನು ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳವಾಗಿದ್ದು, ಇದರಿಂದ ಮನನೊಂದ ಮೋನಿಕಾ ಕೆಲಸ ಮಾಡುತ್ತಿದ್ದ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಹೊತ್ತಾದರೂ ಕೋಣೆಯಿಂದ ಮೋನಿಕಾ ಹೊರ ಬಾರದೇ ಇರುವುದನ್ನ ಗಮನಿಸಿ ಮನೆ ಮಾಲೀಕರು ಮೋನಿಕಾ ಅವರ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೋನಿಕಾ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮನು ಕೂಡ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ವೈದ್ಯರು ಮೋನಿಕಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದ ಮನನೊಂದು ಮನೆಗೆ ಬಂದ ಮನು ಕೂಡ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ಕುವೆಂಪು ನಗರ ಮತ್ತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಯಮತ್ತೂರು ಕಮಿಷನರ್‌ ವಿರುದ್ಧ ದೂರು ದಾಖಲಾಗಿದೆ. ಆದರೆ ಅವರು ಯಾವ ಇಲಾಖೆಯವರು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.