ಮನೆ ಸ್ಥಳೀಯ ಕೇರಳ ಪ್ರಕೃತಿ ವಿಕೋಪ, ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ

ಕೇರಳ ಪ್ರಕೃತಿ ವಿಕೋಪ, ಜನ ಸೇವೆಗೆ ಹೊರಟ ಮೈಸೂರು ವೈದ್ಯರ ತಂಡ

0

ಮೈಸೂರು: ಕೇರಳದ ವೈನಾಡ ನಲ್ಲಿ ಹತ್ತಿ ಹೆಚ್ಚು ಮಳೆಯಿಂದ ಪ್ರಕೃತಿ  ವಿಕೋಪ ದಿಂದ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ,ಜನರನ್ನು ರಕ್ಷಿಸಲು, ಮತ್ತು ಜನರ ಆರೋಗ್ಯ ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ,ಜಿಲ್ಲಾ ಆಡಳಿತ ವತಿಯಿಂದ ,ತಜ್ಞ ವೈದ್ಯರು,ಮತ್ತು   ತಂಡ ವನ್ನು ಔಷಧಿ ಗಳೋಂದಿಗೆ ನಿಯೋಜನೆ ಮಾಡಲಾಗಿದೆ .ಈ ತಂಡವನ್ನೂ   ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಬಾವಲಿ  ಚೆಕ್ ಪೋಸ್ಟ್ ನಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು  ತಹಶೀಲ್ದಾರ್ ಶ್ರೀನಿವಾಸ್,ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ರವರು  ತಜ್ಞ ವೈದ್ಯರಾದ ಡಾ”ಶ್ರೀನಿವಾಸ್,ಡಾ” ನಾಗೇಶ್ ರಾವ್,ಡಾ”ಶೇಷಾದ್ರಿ, ಹಿರಿಯ ಔಷಧ ವಿತರಣಾಧಿಕಾರಿ ಉಮೇಶ್ ತಂಡವನ್ನೂ  ಕೇರಳ ವೈನಾಡುಗೆ ಕಳುಹಿಸಿಕೊಟ್ಟರು.

Join Our Whatsapp Group

ಈ ಸಂದರ್ಭದಲ್ಲಿ ಹುಣಸೂರು  ಉಪ ವಿಭಾಗಾಧಿಕಾರಿ ವೆಂಕಟರಾಜು  ರವರು ಮಾತನಾಡಿ ನಮ್ಮ ಜಿಲ್ಲಾ ಆಡಳಿತ ವತಿಯಿಂದ ನುಲಿತ ತಜ್ಞರನ್ನು ನಿಯೋಜನೆ ಮಾಡಿ ಕೇರಳ ವೈನಾಡಿಗೆ  ಕಳಿಸಿ ಕೊಡುತ್ತಿದ್ದೇವೆ ಹಾಗೂ ನಮ್ಮ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ,ನುರಿತ ತಜ್ಞ ವೈದ್ಯರನ್ನು ಕೇರಳದ ವೈನಾಡಿಗೆ ಜಿಲ್ಲಾಡಳಿತ ವತಿಯಿಂದ ಕಳಿಸುತ್ತಿದ್ದೇವೆ, ಜೊತೆಗೆ ನಮ್ಮ ತಾಲೂಕಿನ ದೊಡ್ಡ ಬೈರನಕುಪ್ಪೆ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು, ನಿಯೋಜನೆ ಮಾಡಿಕೊಂಡಿದ್ದೇವೆ ಜೊತೆಗೆ ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು 10 ಬೆಡ್ ಗಳ ನ್ನೂ ಸಿದ್ದಪಡಿಸಿ ಕೊಂಡಿದ್ದೇವೆ ಹಾಗೂ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ  ಎಂದು ತಿಳಿಸಿದರು.

 ಸಂದರ್ಭದಲ್ಲಿ ಡಾ”ವರ್ಷ  ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಳಾದ ನಾಗೇಂದ್ರ, ರವಿರಾಜ್, RI ಗೌಸ್ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು,ಇನ್ನಿತರರು.ಹಾಜರಿದ್ದರು.