1. ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಕರುಳು ಬೇನೆ ಕಡಿಮೆ ಆಗುವುದು.
2. ಬಾಳೆದಿಂಡಿನ ಪಲ್ಯವನ್ನು ಆಗಾಗ ಸೇವಿಸುತ್ತಿದ್ದರೆ ಕರುಳಿನಲ್ಲಿರುವ ವಿಷ ಕ್ರಿಮಿಗಳು ಸತ್ತು, ಕರುಳಬೇನೆ ಕನಿಷ್ಠ ಗೊಳ್ಳುವುದು.
3. ಬಾಳೆದಿಂಡಿನ ಪಲ್ಯವನ್ನು ಆಗಾಗ ಸೇವಿಸುವುದರಿಂದ ರಕ್ತಾತಿಸಾರದಲ್ಲಿ ಗುಣ ಕಂಡು ಬರುವುದರ ಜೊತೆಗೆ ಕರುಳಿನಲ್ಲಿ ಇರಬಹುದಾದ ವಿಷ ಕ್ರೀಮಿಗಳು ನಾಶ ಹೊಂದುವುದು.
4. ಪರಂಗಿ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತಿನ್ನುವುದರಿಂದ ಕರುಳಿನಲ್ಲಿ ವಾಸಿಸುವ ಕ್ರಿಮಿಗಳು ನಾಶ ಆಗುವುದರ ಮೂಲಕ ಕರುಳು ಬೇನೆ ನಿವಾರಣೆ ಆಗುವುದು.
5. ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ, ಕುಡಿದರೆ ಆಸನಾಗ್ರದಲ್ಲಿ ಆಗುವ ಉರಿ ನಿಲ್ಲುವುದು.
6. ನೆಲ್ಲಿಕಾಯಿಯ ಚೂರ್ಣವನ್ನು ಬಿಸಿ ನೀರಿನಲ್ಲಿ ಕಿವುಚಿ, ಸಕ್ಕರೆ ಸೇರಿಸಿ, ಶೋಧಿಸಿದ ನಂತರ ಕುಡಿದರೆ ಬಾಯಿ ಮೂಗು, ಗುದದ್ವಾರದಿಂದ ಹೊರ ಬರುವ ರಕ್ತ ನಿಲ್ಲುವುದರ ಮೂಲಕ ಕರುಳು ಬೇನೆ ಕಡಿಮೆ ಆಗುವುದು.
7. ಎಲೆಯ ಕೋಸನ್ನು ಹಸಿಯಾಗಿಯೇ ತಿನ್ನುತ್ತಿದ್ದರೆ ಹೊಟ್ಟೆಯ ಹುಣ್ಣು ವಾಸಿ ಆಗುವುದರೋಂದಿಗೆ ಕರುಳ ಬೇನೆಯೂ ಕಡಿಮೆ ಆಗುವುದು.
8. ಹಾಗಲಕಾಯಿ ಗೊಜ್ಜು ವಾರಕ್ಕೊಮ್ಮೆ ಆದರೆ ಸೇವಿಸುತ್ತಿದ್ದರೆ ಕರುಳು ಹುಣ್ಣು ಗುಣವಾಗಿ ರಕ್ತ ಶುದ್ಧ ಹೊಂದುವುದು.
9. ಆರೋರೂಟ್ ಗಂಜಿ ಮಾಡಿ ಸೇವಿಸಿದರೆ ಕರುಳ ಬೆಣ್ಣೆ ಕಡಿಮೆ ಆಗುವುದು.
10. ಬಾರ್ಲಿ ಗಂಜಿ ಕುಡಿಯುವುದರಿಂದಲೂ ಕರುಳ ಬೇನೆ ನಿವಾರಣೆ ಆಗುವುದು.
ಕಿವಿನೋವು:-
1. ಬೆಳ್ಳುಳ್ಳಿಯ ತೋಳೆಯನ್ನು ಹರಳೆಣ್ಣೆಯಲ್ಲಿ ಹುರಿದು, ಆರಿದ ನಂತರ ಕಿವಿಗೆ ಒಂದೊಂದು ತೊಟ್ಟು ಬಿಡುತ್ತಿದ್ದರೆ ಕಿವಿ ನೋವು ಕಡಿಮೆ ಆಗುವುದು.
2. ಬಾಣಂತಿಯರು ಬೆಳ್ಳುಳ್ಳಿಯ ಚಿರುಗಳನ್ನು ಅತ್ತಿರಿ ಹತ್ತಿಯಲ್ಲಿ ಹೊರಬರದಂತೆ ಸುತ್ತಿ ಕಿವಿಯಲ್ಲಿ ಇಟ್ಟುಕೊಂಡರೆ ಶೀತದಿಂದ ಕಿವುಡಾಗುವ ಕಷ್ಟದಿಂದ ಪಾರಾಗುವರು.
3. ಕಿವಿಯೊಳಗೆ ಸಣ್ಣ ಕ್ರಿಮಿಗಳು ಸೇರಿದಾಗ, ಅಡಿಗೆಯ ಉಪ್ಪನ್ನು ಸ್ವಲ್ಪ ನೀರಿಗೆ ಬೆರೆಸಿ, ಕಿವಿಯೊಳಗೆ ತೋಟಕಿ ಸುತ್ತಿದ್ದರೆ ಕ್ರಿಮಿಗಳು ಹೊರಬರುವವು ಇಲ್ಲವೇ ಇದ್ದಲ್ಲಿಯೇ ಸಾಯುವವು
4. ಹಸಿ ಮೂಲಂಗಿಯ ಸೇವನೆಯಿಂದ ಕಿವಿ ನೋವು ನಿವಾರಣೆ ಆಗುವುದು.
5. ಕಿವಿ ಹುಣ್ಣಾದಾಗ, ಸೋರುತ್ತಿರುವಾಗ ತುಳಸಿ ಎಲೆಯ ರಸವನ್ನು ತೆಗೆದು, ಕಿವಿಯೊಳಗೆ ಹಿಂದುತ್ತಿದ್ದರೆ ಕಿವಿ ನೋವು ಕಡಿಮೆ ಆಗುವುದು.
6. ಬೇವಿನ ಸೊಪ್ಪನ್ನು ನೀರಿನಲ್ಲಿ ಬೇಯಿಸಿ, ಜಾರುವ ಹಬೆಯನ್ನು ಕಿವಿಗೆ ಹಾಯಿಸುತ್ತಿದ್ದರೆ ಕಿವಿನೋವು ಕಡಿಮೆ ಆಗುವುದು.
7. ಯಾವುದಾದರೂ ಕ್ರಿಮಿಕೀಟ ಅರಿವಿಲ್ಲದೆ ಕಿವಿಯೊಳಗೆ ಹೋಗಿ, ಹೊರಕ್ಕೆ ಬರಲಾರದೆ ಬಾಧೆಪಡುವಾಗ,ಬೇವಿನ ಸೊಪ್ಪಿನ ಒಂದು ಚಮಚ ರಸಕ್ಕೆ ಒಂದು ಚಿಟಿಕಿ ಚಿಟಿಕೆಯಷ್ಟು ಉಪ್ಪಿನ ಪುಡಿ ಸೇರಿಸಿ,ಕಿವಿಗೆ ಬಿಡುವುದರಿಂದ ಕ್ರಿಮಿಗಳು ನಾಶ ಆಗುವುದರ ಮೂಲಕ ಕಿವಿ ನೋವು ಕಡಿಮೆ ಆಗುವುದು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.