ಮನೆ ರಾಜಕೀಯ ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಪ್ಪಿತವೇ? : ಬಿಜೆಪಿ ಪ್ರಶ್ನೆ

ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಪ್ಪಿತವೇ? : ಬಿಜೆಪಿ ಪ್ರಶ್ನೆ

0

ಬೆಂಗಳೂರು(Bengaluru): ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ನಡೆದ ವಿಜಯಕುಮಾರ್ ಕಾಂಬಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.

ದಲಿತರ ಮೇಲಿನ ದೌರ್ಜನ್ಯಗಳನ್ನು ಬಿಜೆಪಿ ತಲೆಗೆ ಕಟ್ಟುವ ಕಾಂಗ್ರೆಸ್‌ ಕಲಬುರಗಿ ದಲಿತನ ಹತ್ಯೆಯನ್ನು ಸಮರ್ಥಿಸುತ್ತಿರುವುದೇಕೆ? ಆರೋಪಿಗಳ ಸಮುದಾಯದ ಮತ ತಪ್ಪುತ್ತದೆ ಎಂಬ ಭಯವೇ? ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಪ್ಪಿತವೇ? ಎಂದು ಬಿಜೆಪಿ ಕೇಳಿದೆ.

ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ, ಕ್ರೌರ್ಯ, ಕೊಲೆ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್‌ ಪಕ್ಷ ಏಕೆ ಮೌನವಾಗಿರುತ್ತದೆ ಎಂದು ಪ್ರಶ್ನಿಸಿದೆ.

ಅಂದು, ಕಾಂಗ್ರೆಸ್ ಶಾಸಕ, ದಲಿತ ನಾಯಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ಮತಾಂಧರು ಸುಟ್ಟಾಗ ಕಾಂಗ್ರೆಸ್ ನಾಯಕರಿಗೆ ದಲಿತ ನಾಯಕನ ಕೂಗು ಕೇಳಿಸಲೇ ಇಲ್ಲ. ಇಂದು, ಕಲಬುರಗಿಯ ದಲಿತ ಯುವಕನನ್ನು ಧರ್ಮಾಂಧರು ಹತ್ಯೆ ಮಾಡಿದಾಗ ಕಾಂಗ್ರೆಸ್ಸಿಗರು ಇದಕ್ಕೆ ಮತೀಯ ಬಣ್ಣ ಬಳಿಯಬೇಡಿ ಎಂದು ಪ್ರವಚನ ನೀಡುತ್ತಿದ್ದಾರೆ ಎಂದು ಟ್ವೀಟಿಸಿದೆ.